ಹಳಿಯಲ್ಲಿ ಕೆಟ್ಟುನಿಂತ ಟವರ್ ಕಾರ್: ಐದು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಹೊಸದಿಗಂತ ವರದಿ, ಹುಬ್ಬಳ್ಳಿ:
 ಎಲೆಕ್ಟ್ರಿಕ್ ಲೈನ್ ಪರೀಕ್ಷಿಸುವ ಟವರ್ ಕಾರ್ ಎಂಜಿನ್ ಕುಂದಗೋಳ ತಾಲೂಕು ಗುಡಗೇರಿ, ಸಂಶಿ ನಡುವಿನ ಹಳಿಯಲ್ಲಿ ಶುಕ್ರವಾರ ರಾತ್ರಿ ಕೆಟ್ಟು ನಿಂತ ಪರಿಣಾಮ ಐದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ತಕ್ಷಣ ಕ್ರಮ ತೆಗೆದುಕೊಂಡು ರೈಲ್ವೆ ಅಧಿಕಾರಿಗಳು ಪರಿಶೀಲಿಸಿ ಈ ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ತಡ ರಾತ್ರಿ ತಿರುಚನಾಪಳ್ಳಿ-ಗಂಗಾನಗರ, ಯಶವಂತಪುರ ನಿಜಾಮುದ್ದೀನ್ ಧಾರವಾಡ- ಬೆಂಗಳೂರು ರೈಲುಗಳು ಈ ಸಮಸ್ಯೆಯಿಂದ ಕುಂದಗೋಳದಲ್ಲಿ ನಿಂತಿದ್ದವು. ಹಾಗೆಯೇ ಯಶವಂತಪುರ ವಾಸ್ಕೋ ರೈಲು ಯಲವಿಗಿಯಲ್ಲಿ ಹಾಗೂ ರಾಣಿ ಚೆನ್ನಮ್ಮ ಎಕ್ಸಪ್ರೆಸ್ ಮತ್ತು ಧಾರವಾಡ ಮೈಸೂರು ರೈಲು ಹುಬ್ಬಳ್ಳಿಯ ನಿಲ್ದಾಣದಲ್ಲಿ ನಿಂತಿದ್ದವು ಎಂದು ಅಧಿಕಾರಿಗಳು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!