ಜಿಂಕೆ ಮಾಂಸ ಸಾಗಿಸುತ್ತಿದ್ದ ಆರೋಪಿಗಳು ಸೆರೆ; 65 ಕೆಜಿ ಮಾಂಸ ವಶ

ಹೊಸದಿಗಂತ ವರದಿ, ಯಲ್ಲಾಪುರ:
ರಾಷ್ಟ್ರೀಯ ಹೆದ್ದಾರಿ 63ರ ಜೋಡಕೆರೆ ಪೊಲೀಸ್‌ ಚೆಕ್‌ಪೋಸ್ಟ್‌ ಬಳಿ ಅಕ್ರಮವಾಗಿ ಜಿಂಕೆ ಮಾಂಸವನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಉದ್ಯಮನಗರ ನಿವಾಸಿ ಮನ್ಸೂರ್ ಅಹ್ಮದ್ ಸತ್ತಾರ್ ಸಾಬ್, ಕಲಘಟಗಿ ನಿವಾಸಿ ಮೌಲಾಲಿ ಬಾಬಾಸಾಬ್ ಬೆಂಗಡಿ ಬಂಧಿತ ಆರೋಪಿಗಳಾಗಿದ್ದು, ಇನ್ನೋರ್ವ ಆರೋಪಿ ತಿಮ್ಮಣ್ಣ ಗೌಡ ತಲೆಮರಿಸಿಕೊಂಡಿದ್ದಾನೆ. ಬಂಧಿತರಿಂದ 65 ಕೆಜಿ ಜಿಂಕೆ ಮಾಂಸ, ಬಳಸಿದ ಆಯುಧ ಹಾಗೂ ಕಾರ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಚೆಕ್‌ಪೋಸ್ಟ್‌ ಬಳಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸಟೇಬಲ್ ದೀಪಕ್ ವಿನೋದ ನಾಯ್ಕ್, ಪರಶುರಾಮ ಕಾಳೆ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪಿಎಸ್‌ಐ ಮಂಜುನಾಥ ಗೌಡರ್‌ ಪ್ರಕರಣವನ್ನು ಪರಿಶೀಲಿಸಿ, ಹೆಚ್ಚಿನ ತನಿಖೆಗಾಗಿ ಅರಣ್ಯ ಇಲಾಖೆಗೆ ವರ್ಗಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!