ಧಾರವಾಡ ಐಐಟಿ ಕಾಮಗಾರಿ ವೀಕ್ಷಣೆ: ನವೆಂಬರ್ ನಲ್ಲಿ ಕಟ್ಟಡ ಉದ್ಘಾಟನೆ ಎಂದ ಸಚಿವ ಜೋಶಿ

ಹೊಸದಿಗಂತ ವರದಿ, ಧಾರವಾಡ

ಬೇಲೂರು ಕೈಗಾರಿಕಾ ಪ್ರದೇಶದ ಹೊರಹೊಲಯದಲ್ಲಿ ನಿರ್ಮಿಸುತ್ತಿರುವ ಧಾರವಾಡ ಐಐಟಿ ಕ್ಯಾಂಪಸ್‌ಗೆ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ-ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಭೇಟಿ ನೀಡಿದರು.
ಸಂಸ್ಥೆಯ ವಸತಿ ನಿಲಯ, ಆಡಳಿತ ಕಟ್ಟಡಗಳ ಕಾಮಗಾರಿ ವೀಕ್ಷಿಸಿದ ಸಚಿವ ಜೋಶಿ, ಯೋಜನೆಯಂತೆ ಕಳೆದ 2022ರ ಮಾರ್ಚನಲ್ಲಿ ಪೂರ್ಣಗೊಳ್ಳಬೇಕಿತ್ತು. ಕೋವಿಡ್ ಕಾರಣದಿಂದ ಸ್ವಲ್ಪಮಟ್ಟಿಗೆ ವಿಳಂಬವಾಗಿದೆ ಎಂದರು.
ಬರುವ ನವೆಂಬರ್ ತಿಂಗಳಲ್ಲಿ ಐಐಟಿ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಬೇಗನೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದ ಸಚಿವರು, ಈ ಕುರಿತು ಐಐಟಿ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಬೇಕೆಂದು ಹೇಳಿದರು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಅರಣ್ಯ ವಸತಿ-ವಿಹಾರದಾಮಗಳ ಅಧ್ಯಕ್ಷ ರಾಜು ಕೊಟೆನ್ನವರ, ಡಿಸಿ ಗುರುದತ್ತ ಹೆಗಡೆ, ಎಸ್ಪಿ ಲೊಕೇಶ ಜಗಲಾಸರ್, ಐಐಟಿ ಕುಲಸಚಿವ ಡಾ.ಬಸವರಾಜಪ್ಪ, ಡಿವೈಎಸ್ಪಿ ಎಂ..ಬಿ.ಸoಕದ, ತಹಸಿಲ್ದಾರ್ ಸಂತೋಷ ಹಿರೇಮಠ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!