ಧಾರವಾಡ: ಪಂಡಿತ್ ಭೀಮಸೇನ ಜೋಷಿ ಜನ್ಮದಿನದ ಪ್ರಯುಕ್ತ ಸಂಗೀತೋತ್ಸವ

ಹೊಸದಿಗಂತ ವರದಿ, ಹುಬ್ಬಳ್ಳಿ
ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಮತ್ತು ಕ್ಷಮತಾ ಸಂಸ್ಥೆಯ ಸಹಯೋಗದಲ್ಲಿ ಭಾರತ ರತ್ನ ಪಂಡಿತ್ ಭೀಮಸೇನ ಜೋಶಿ ಜನ್ಮನೋತ್ಸವ ಅಂಗವಾಗಿ ಮೇ 14 -15 ರಂದು ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಭೀಮಲಾಪ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕ್ಷಮತಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಹಲವು ವರ್ಷಗಳಿಂದ ಭೀಮಸೇನ ಜೋಶಿಯವರ ಸಮನಾರ್ಥ ಭೀಮಪಲಾಸ ಸಂಗೀತೋತ್ಸವ ಮಾಡಲಾಗುತ್ತಿದೆ. ಈ ವರ್ಷ ವಿಶೇಷವಾಗಿ ಮಾಡಲಾಗುತ್ತಿದ್ದು, ಸಂಗೀತೋತ್ಸವದಲ್ಲಿ 21 ಕ್ಕೂ ಹೆಚ್ಚು ಖ್ಯಾತ ಕಲಾವಿದರು ಭಾಗವಹಿಸುತ್ತಾರೆ ಎಂದರು.
ಮೇ 14 ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ  ಉದ್ಘಾಟಿಸುವರು. ಮೇ 15 ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಂಗೀತೋತ್ಸವದಲ್ಲಿ ಗಣಪತಿ ಗಣಪತಿ ಭಟ್ಟ ಹಾಸನಗಿ, ಜಯಂತತೀರ್ಥ ಮೇವುಂಡಿ, ವಿದುಷಿ ಗೌರಿ ಪಠಾರೆ, ರಮಾಕಾಂತ ಗಾಯಕವಾಡ, ಆದಿತ್ಯ ಮೋಡಕ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸುವರು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!