ಮತ್ತೆ ತಂಡ ಜವಾಬ್ದಾರಿ ಧೋನಿ ಹೆಗಲಿಗೆ: ಹೈದರಾಬಾದ್​ ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇಂದು ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡ ಟಾಸ್​ ಗೆದ್ದು ಬೌಲಿಂಗ್ ಆರಿಸಿಕೊಂಡಿದೆ.
ಆಡಿರುವ 8 ಪಂದ್ಯಗಳಲ್ಲಿ ಸತತವಾಗಿ 5 ರಲ್ಲಿ ಗೆಲುವು ಕಂಡಿದ್ದ ಹೈದರಾಬಾದ್​ನ ಗೆಲುವಿನ ಓಟಕ್ಕೆ ಗುಜರಾತ್​ ಟೈಟಾನ್ಸ್​ ಬ್ರೇಕ್​ ಹಾಕಿತ್ತು. ಈ ಐಪಿಎಲ್​ ಸೀಸನ್​ನಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ.

ಇನ್ನು 4 ಬಾರಿಯ ಚಾಂಪಿಯನ್​ ತಂಡವಾಗಿರುವ ಸಿಎಸ್​ಕೆ ಈ ಅವತರಣಿಕೆಯಲ್ಲಿ ಕಳಪೆ ಸಾಧನೆ ಮಾಡಿದೆ. ಲೀಗ್​ ಆರಂಭಕ್ಕೂ ಮುನ್ನ ಯಶಸ್ವಿ ಕ್ಯಾಪ್ಟನ್​ ಆಗಿದ್ದ ಮಹೇಂದ್ರ ಸಿಂಗ್​ ಧೋನಿ, ಆಲ್​ರೌಂಡರ್​ ರವೀಂದ್ರ ಜಡೇಜಾಗೆ ನಾಯಕತ್ವ ಬಿಟ್ಟು ಕೊಟ್ಟಿದ್ದರು. ಆದರೆ, ಇದು ಫಲ ನೀಡಲಿಲ್ಲ.
ಇದೀಗ ಸಿಎಸ್​ಕೆ ತಂಡದ ಜವಾಬ್ದಾರಿ ಮತ್ತೆ ಧೋನಿ ಹೆಗಲಿಗೇ ಬಿದ್ದಿದೆ. ಉಳಿದ ಪಂದ್ಯಗಳಲ್ಲಿ ಧೋನಿ ತಂಡವನ್ನು ಮುನ್ನಡೆಸಿ ಪ್ಲೇ ಆಫ್​ಗೆ ಕೊಂಡೊಯ್ಯಲಿದ್ದಾರಾ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ಸಿಎಸ್​ಕೆ: ಋತುರಾಜ್​ ಗಾಯಕ್ವಾಡ್​, ಡೆವೋನ್ ಕಾನ್ವಾಯ್​, ರಾಬಿನ್​ ಉತ್ತಪ್ಪ, ಅಂಬಟಿ ರಾಯುಡು, ಮಹೇಂದ್ರ ಸಿಂಗ್​ ಧೋನಿ, ರವೀಂದ್ರ ಜಡೇಜಾ, ಮಿಚೆಲ್​ ಸ್ಯಾಂಟ್ನರ್​, ಡ್ವೇನ್​ ಪ್ರಿಟೋರಿಯಸ್​, ಸಿಮ್ರಾಜಿತ್​ ಸಿಂಗ್​, ಮಹೇಶ್​ ತೀಕ್ಷಣ, ಮುಖೇಶ್​ ಚೌಧರಿ.

ಹೈದರಾಬಾದ್​: ಕೇನ್ ವಿಲಿಯಮ್ಸನ್​, ಅಭಿಷೇಕ್​ ಶರ್ಮಾ, ರಾಹುಲ್​ ತ್ರಿಪಾಠಿ, ಐಡನ್​ ಮಾಕ್ರಮ್​, ನಿಕೋಲಸ್​ ಪೂರನ್​, ಶಶಾಂಕ್​ ಸಿಂಗ್​, ವಾಷಿಂಗ್ಟನ್​ ಸುಂದರ್, ಭುವನೇಶ್ವರ್ ಕುಮಾರ್​, ಮಾರ್ಕೊ ಜಾನ್ಸನ್​, ಉಮ್ರಾನ್​ ಮಲಿಕ್​, ಟಿ. ನಟರಾಜನ್​.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!