ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಸಿಂಗಾನಲ್ಲೂರಿನ ಕಾರ್ಪೋರೇಷನ್ ಶಾಲೆಯೊಂದರಲ್ಲಿ ಪೌಷ್ಠಿಕಾಂಶದ ಮಾತ್ರೆ ಸೇವಿಸಿದ ವಿದ್ಯಾರ್ಥಿನಿ ಹೊಟ್ಟೆನೋವಿನಿಂದ ಬಳಲಿ ಮೃತಪಟ್ಟಿದ್ದಾಳೆ.
ಶಾಲೆಯಲ್ಲಿ ಕೊಟ್ಟ ಮಾತ್ರೆಯಿಂದಾಗಿ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಯಿಂಬ ಬಂದ ಪುಟಾಣಿ ದಿಯಾಶ್ರೀ ಹೊಟ್ಟೆ ನೋವು ಎಂದು ಅತ್ತಿದ್ದಾಳೆ.
ಪೋಷಕರು ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಯಮತ್ತೂರಿನಲ್ಲಿ ಮಗುವಿನ ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದ್ದು, ಪೋಷಕರು ಮಾತ್ರೆಯೇ ಇದಕ್ಕೆಲ್ಲ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಬರಬೇಕಿದೆ, ಅದು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.