ದಿನಭವಿಷ್ಯ| ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೆ ನಿಮಗೇ ಒಳಿತು

ಮೇಷ
ಸಾಂಸಾರಿಕ ವಿಷಯಗಳಿಗೆ ಇಂದು ಹೆಚ್ಚು ಗಮನ ಕೊಡಬೇಕು. ಪ್ರಮುಖ ಸಮಸ್ಯೆ ನಿವಾರಿಸಬೇಕು. ವೃತ್ತಿಯಲ್ಲಿ ಕೆಲವರ ಕಿರಿಕಿರಿ ಸಂಭವ.

ವೃಷಭ
ನಿಮ್ಮ ಆತ್ಮೀಯ ಬಾಂಧವ್ಯದಲ್ಲಿ  ಬಿರುಕು ಮೂಡಿಸಲು ಕೆಲವರು ಯತ್ನಿಸಬಹುದು. ನಿಮ್ಮ ಎಚ್ಚರದಲ್ಲಿ ನೀವಿರಿ. ಭಿನ್ನಮತ ಬೇಗನೆ ಶಮನಗೊಳಿಸಿ.

ಮಿಥುನ
ಬಂಧುಗಳೊಂದಿಗೆ ಸಂವಾದ. ಕೌಟುಂಬಿಕ ಶಾಂತಿ ಹಾಳು ಮಾಡುತ್ತಿರುವ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡಿ. ಪರಿಸ್ಥಿತಿ ಬಿಗಡಾಯಿಸದಿರಿ.

ಕಟಕ
ದಿನವು ಸುಗಮವಾಗಿ  ಸಾಗಿದರೂ ಆಗಾಗ ಕಿರಿಕಿರಿ ಮೂಡಬಹುದು. ಬಂಧುಗಳಿಂದ ಟೀಕೆ. ವೃತ್ತಿಯ ಹೊಣೆಗಾರಿಕೆ  ಸರಿಯಾಗಿ ನಿಭಾಯಿಸಿ.

ಸಿಂಹ
ಕರ್ತವ್ಯಕ್ಕೆ ಗಮನ ಕೊಡಿ.  ನಿಮ್ಮ ಗಮನ ಬೇರೆಡೆ ಸೆಳೆಯಲು ಕೆಲವರು ಯತ್ನಿಸಬಹುದು. ಅದನ್ನು ಕಡೆಗಣಿಸಿ. ಮೋಜು ಮಸ್ತಿಗೆ ಇದು ಸಮಯವಲ್ಲ.

ಕನ್ಯಾ
ಪ್ರೀತಿಪಾತ್ರರ ಕುರಿತ ನಿಮ್ಮ ಪೊಸೆಸಿವ್‌ನೆಸ್ ಸಂಘರ್ಷಕ್ಕೆ ಕಾರಣವಾದೀತು. ಅಂತಹ ಮನಸ್ಥಿತಿ ತ್ಯಜಿಸಿ. ಹೊಂದಾಣಿಕೆ ಒಳಿತು.

ತುಲಾ
ಹಣಕಾಸಿನ ವಿಚಾರದಲ್ಲಿ ವ್ಯಸ್ತರಾಗುವಿರಿ. ಹಣದ ಕೊರತೆ ಕಾಡಿದರೂ ಸೂಕ್ತ ನೆರವು ಸಿಗುವುದು. ಇದೇವೇಳೆ, ದುಂದುವೆಚ್ಚಕ್ಕೆ ಕಡಿವಾಣ ಹಾಕಿರಿ.

ವೃಶ್ಚಿಕ
ಭಾವನಾತ್ಮಕ ಸಂಘರ್ಷ.ಕರ್ತವ್ಯ ಮತ್ತು ಪ್ರೀತಿಯ ಮಧ್ಯೆ ಸಮತೋಲನ ಸಾಧಿಸಬೇಕು. ಒಂದು ಮತ್ತೊಂದರ ಮೇಲೆ ಅಡ್ಡಪರಿಣಾಮ ಬೀರದಿರಲಿ.

ಧನು
ವೃತ್ತಿಯಲ್ಲಿ  ನಿಮ್ಮ ಬದ್ಧತೆ ಮರೆಯದಿರಿ. ಮನಸ್ಸು ಚಂಚಲವಾಗ ದಂತೆ ನೋಡಿಕೊಳ್ಳಿ. ಆಮಿಷಗಳನ್ನು ತಿರಸ್ಕರಿಸಿದರೆ ಒಳಿತು. ಕೌಟುಂಬಿಕ ಒತ್ತಡ.

ಮಕರ
ಭಾವುಕ ಸನ್ನಿವೇಶಕ್ಕೆ ಸಿಲುಕುವಿರಿ. ಪ್ರೀತಿಯ ವಿಷಯ ದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ವಿವಾದಕ್ಕೆ ಸಿಲುಕದಿರಿ. ಸಹನೆ ಅತೀ ಮುಖ್ಯ.

ಕುಂಭ
ಇಂದು ಕೈಗೊಂಡ ಕಾರ್ಯದಲ್ಲಿ  ಯಶಸ್ಸು. ಸಮಸ್ಯೆ ಯೊಂದು ಸುಲಭದಲ್ಲಿ ಪರಿಹಾರ ಕಾಣುವುದು.  ಕೌಟುಂಬಿಕ ಸೌಹಾರ್ದ, ಸಹಕಾರ.

ಮೀನ
ಖಾಸಗಿ  ಸಮಸ್ಯೆ ಯೊಂದಕ್ಕೆ ಕೊನೆಗೂ ಪರಿಹಾರ ಕಾಣುವಿರಿ. ಆಪ್ತರೊಬ್ಬರ ಸಹಕಾರ ಇದಕ್ಕೆ ನೆರವಾಗುವುದು.  ಪ್ರೀತಿಯಲ್ಲಿ  ಯಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!