ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಮಹೇಂದರ್ಗಢ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 6 ಮಂದಿ ಮೃತಪಟ್ಟಿದ್ದಾರೆ.
ಮಹೇಂದರ್ಗಢದಲ್ಲಿ ನಾಲ್ವರು ಕಾಲುವೆಯಲ್ಲಿ ಮುಳುಗಿದ್ದು, ಸೋನಿಪತ್ನಲ್ಲಿ ನದಿಯಲ್ಲಿ ಇಬ್ಬರು ಯುವಕರು ಮುಳುಗಿದ್ದಾರೆ.
ಸುಮಾರು ಏಳು ಅಡಿ ಗಣಪತಿಯನ್ನು ನದಿಯಲ್ಲಿ ಮುಳುಗಿಸುವ ವೇಳೆ ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಎನ್ಡಿಆರ್ಎಫ್ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನಿತರರನ್ನು ರಕ್ಷಿಸಲಾಗಿದೆ ಎಂದು ಮಹೇಂದರ್ಗಢ್ನ ಸಿವಿಲ್ ಸರ್ಜನ್ ಡಾ. ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.