ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ನಿನ್ನೆಯೇ ಬೆಂಗಳೂರಿಗೆ ಬಂದು ಇಳಿದಿದ್ದರು.
ನಿನ್ನೆ ಔತಣಕೂಟ ಏರ್ಪಡಿಸಿದ್ದು, ರಾಜ್ಯದ ಸಿನಿ ಹಾಗೂ ಕ್ರೀಡಾ ಜಗತ್ತಿನ ಗಣ್ಯರು ಔತಣಕೂಟದಲ್ಲಿ ಭಾಗಿಯಾಗಿದ್ದರು. ಸ್ಯಾಂಡಲ್ವುಡ್ನಿಂದ ನಟ ಯಶ್, ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕರಾದ ಪ್ರಶಾಂತ್ ನೀಲ್, ಅಶ್ವಿನಿ ಪುನೀತ್ ರಾಜ್ಕುಮಾರ್ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ಜಾವಗಲ್ ಶ್ರೀನಾಥ್, ಮನೀಶ್ ಪಾಂಡೆ, ಅನಿಲ್ ಕುಂಬ್ಳೆ ಹಾಗೂ ಮಯಾಂಕ್ ಅಗರ್ವಾಲ್ ಕೂಡ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.