ಹೊಸದಿಗಂತ ವರದಿ,ಮಂಗಳೂರು:
ಹೊಸದಿಗಂತ ಬಂಟ್ವಾಳ ತಾಲೂಕು ವರದಿಗಾರ ವೆಂಕಟೇಶ್ ಬಂಟ್ವಾಳ ಸಹಿತ ವಿವಿಧ ಕ್ಷೇತ್ರದ 54 ಸಾಧಕರು ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಯಕ್ಷಗಾನ ಕ್ಷೇತ್ರದ ಖ್ಯಾತ ಹಾಸ್ಯ ಕಲಾವಿದ ಜಯರಾಮ ಆಚಾರ್ಯ, ಸಮಾಜ ಸೇವಕ ಕೊಡುಗೈ ದಾನಿ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಜನರ ಪಾಲಿನ ಎರ್ಮಾಲ ಡಾಕ್ಟರ್ ಎಂದೇ ಹೆಸರುವಾಸಿಯಾದ ಡಾ. ಭಾಸ್ಕರ್ ರಾವ್, ದೈವನರ್ತಕ ವೆಂಕಪ್ಪ ನಲಿಕೆ, ಪತ್ರಕರ್ತರಾದ ವಿಲ್ಪ್ರೆಡ್ ಡಿಸೋಜ ಮತ್ತು ಶಶಿಧರ ಪೊಯ್ಯತ್ತಬೈಲು ಸಹಿತ ಹಲವಾರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಾರದ ಫ್ರೆಂಡ್ಸ್ ಸರ್ಕಲ್ ಸಜೀಪ ಸಹಿತ ವಿವಿಧ ಸಂಘ ಸಂಸ್ಥೆಗಳು ಆಯ್ಕೆಯಾಗಿವೆ.