ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆ ಗೆಲ್ಲೋಕೆ ಜನಮನ್ನಣೆ ಎಷ್ಟು ಮುಖ್ಯವೋ ಅಷ್ಟೇ ದೈವದ ಆಶೀರ್ವಾದವೂ ಮುಖ್ಯವಾಗಿದ್ದು, ಡಿಕೆಶಿ ಟೆಂಪಲ್ ರನ್ ಶುರು ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ಪೂಜೆ ಮುಗಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪತ್ನಿ ಉಷಾ, ನಿನ್ನೆ ಶೃಂಗೇರಿಯಲ್ಲಿ ಚಂಡಿಕಾಯಾಗ ನೆರವೇರಿಸಿದ್ದಾರೆ.
ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಚಂಡಿಕಾಯಾಗ ಮಾಡಿಸಿದ್ದಾರೆ. ಯಾಗದ ಮೂಲಕ ನೂತನ ಸಂಕಲ್ಪಗೈದಿರುವ ಡಿಕೆಶಿ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.
ಯಾಗಗಳಿಂದ ಸಕಾರಾತ್ಮಕ ಶಕ್ತಿ ಬಂದಿದೆ, ದೇವರ ಅನುಗ್ರಹದಿಂದ ಕಾಂಗ್ರೆಸ್ಗೆ ಭಾರೀ ಬಲ ದೊರಕಿದ್ದು, ಈ ಬಾರಿ 141 ಸೀಟ್ ಗೆಲ್ಲುವುದು ಖಚಿತ ಎಂದು ಡಿಕೆಶಿ ಹೇಳಿದ್ದಾರೆ.