ರಾಜಕೀಯ ಬೇಡ, ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಿ: ವಿಪಕ್ಷಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೂತನ ಸಂಸತ್ ಕಟ್ಟಡ (New Parliament Building) ಉದ್ಘಾಟನೆ ವಿಚಾರದಲ್ಲಿ ವಿಪಕ್ಷಗಳು ವಿವಾದ ಎಬ್ಬಿಸುತ್ತಿರುವ ನಡುವೆ ಸಮಾರಂಭಕ್ಕೆ (Inauguration) ಆಗಮಿಸುವಂತೆ ವಿರೋಧ ಪಕ್ಷಗಳ ಮುಖಂಡರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮನವಿ ಮಾಡಿದ್ದಾರೆ.

ನೂತನ ಸಂಸತ್ ಕಟ್ಟಡ ಉದ್ಘಾಟನೆಯು ಐತಿಹಾಸಿಕ ಸಂದರ್ಭ , ಇಂತಹ ವಿಶೇಷ ಸಮಯಕ್ಕೆ ಸಾಕ್ಷಿಯಾಗದೇ ಉಳಿಯುವ ವಿರೋಧ ಪಕ್ಷಗಳ ಮುಖಂಡರ ನಿಲುವು ಸರಿಯಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಸಂಸತ್ ಕಟ್ಟಡ ಉದ್ಘಾಟನೆಯಂತಹ ವಿಶೇಷ ಗಳಿಗೆಯಲ್ಲೂ ವಿರೋಧ ಪಕ್ಷಗಳು ರಾಜಕಾರಣ (Politicisation) ತರುವುದು ಸರಿಯಲ್ಲ. ಸಂಸತ್ ಕಟ್ಟಡದ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಲೋಕಸಭೆಯ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರೇ ಆಹ್ವಾನಿಸಿದ್ದಾರೆ.

ಲೋಕಸಭೆಯ ಸಭಾಧ್ಯಕ್ಷರನ್ನು ಕಸ್ಟೋಡಿಯನ್ ಆಫ್ ದಿ ಪಾರ್ಲಿಮೆಂಟ್ ಎಂದು ಕರೆಯಲಾಗುತ್ತೆ. ಹೀಗಿರುವಾಗ ಸ್ವತಃ ಸಭಾಧ್ಯಕ್ಷರೇ ಪ್ರಧಾನ ಮಂತ್ರಿ ಅವರಿಗೆ ಉದ್ಘಾಟನೆಗೆ ಆಹ್ವಾನಿಸಿರುವದರಲ್ಲಿ ತಪ್ಪೇನಿದೆ? ಅಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯ ಸಭಾನಾಯಕರು. ಇದರಲ್ಲಿ ರಾಷ್ಟ್ರಪತಿಗಳನ್ನು ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ವಿಪಕ್ಷಗಳು ಅನಗತ್ಯ ವಿಚಾರ ಮುಂದಿಟ್ಟು ಸಮಾರಂಭ ಬಹಿಷ್ಕಾರ ಮಾಡುತ್ತೇವೆ ಎನ್ನುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.

ರಾಜಕೀಯ ಮಾಡಲು ಸಾಕಷ್ಟು ವಿಚಾರಗಳಿವೆ. ಇಂತಹ ಐತಿಹಾಸಿಕ ಸಮಾರಂಭದ ವಿಚಾರದಲ್ಲಿ ರಾಜಕೀಯ ಮಾಡದೇ ವಿಪಕ್ಷ ನಾಯಕರು ಕಾರ್ಯಕ್ರಮಕ್ಕೆ ಹಾಜರಾಗುವುದು ಸೂಕ್ತ. ಈ ನಿಟ್ಟಿನಲ್ಲಿ ವಿಪಕ್ಷಗಳ ನಾಯಕರು ಇನ್ನೊಮ್ಮೆ ಯೋಚಿಸಿ ತಮ್ಮ ನಿಲುವನ್ನು ಬದಲಿಸಿಕೊಳ್ಳಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!