ನಿಮ್ಮ ಚುನಾವಣಾ ಭಾಷಣದಲ್ಲಿ ನಮ್ಮ ದೇಶವನ್ನು ಎಳೆದು ತರಬೇಡಿ: ಪಾಕಿಸ್ತಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭಾ ಚುನಾವಣೆ ಕುರಿತು ನೆರೆಯ ಪಾಕಿಸ್ತಾನ ತಕರಾರು ತೆಗೆದಿದ್ದು, ಭಾರತದ ರಾಜಕೀಯ ನಾಯಕರು ತಮ್ಮ ಚುನಾವಣಾ ಭಾಷಣದಲ್ಲಿ ಅನಾವಶ್ಯಕವಾಗಿ ಪಾಕಿಸ್ತಾನವನ್ನು ಎಳೆದು ತರುತ್ತಿದ್ದಾರೆ ಎಂದು ಕಿಡಿಕಾರಿದೆ.

ಈ ಕುರಿತು ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್, ‘ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಭಾರತೀಯ ನಾಯಕರು ಮಾಡುವ ಎಲ್ಲಾ ಹಕ್ಕುಗಳನ್ನು ಇಸ್ಲಾಮಾಬಾದ್ ತಿರಸ್ಕರಿಸುತ್ತದೆ. ಭಾರತದ ರಾಜಕಾರಣಿಗಳು ಚುನಾವಣಾ ಉದ್ದೇಶಗಳಿಗಾಗಿ ಪಾಕಿಸ್ತಾನವನ್ನು ತಮ್ಮ ಸಾರ್ವಜನಿಕ ಭಾಷಣದಲ್ಲಿ ಎಳೆದು ತರುವ ಅಜಾಗರೂಕ ಅಭ್ಯಾಸವನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಕಿಡಿಕಾರಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮೇಲೆ ಅನಗತ್ಯವಾದ ಹಕ್ಕುಗಳನ್ನು ಪ್ರತಿಪಾದಿಸುವ ಭಾರತೀಯ ನಾಯಕರಿಂದ ಪ್ರಚೋದನಕಾರಿ ಹೇಳಿಕೆಗಳು ಆತಂಕಕಾರಿ. ಪಾಕಿಸ್ತಾನವು ಈ ಹಕ್ಕುಗಳನ್ನು ತಿರಸ್ಕರಿಸುತ್ತದೆ. ಅತಿ-ರಾಷ್ಟ್ರೀಯತೆಯಿಂದ ಉತ್ತೇಜಿತವಾಗಿರುವ ಈ ಪ್ರಚೋದನಕಾರಿ ಮಾತುಗಳು ಪ್ರಾದೇಶಿಕ ಶಾಂತಿ ಮತ್ತು ಸಂವೇದನಾಶೀಲತೆಗೆ ಗಂಭೀರ ಬೆದರಿಕೆಯನ್ನುಂಟುಮಾಡುತ್ತದೆ. ಭಾರತದ ಹಕ್ಕುಗಳು ಐತಿಹಾಸಿಕ ಮತ್ತು ಕಾನೂನು ಸತ್ಯಗಳಿಗೆ ವಿರುದ್ಧವಾಗಿವೆ. ಕಾನೂನು ಸಂಗತಿಗಳು ಮತ್ತು ನೆಲದ ವಾಸ್ತವಗಳು ಜಮ್ಮು ಮತ್ತು ಕಾಶ್ಮೀರದ ಮೇಲಿನ ಭಾರತದ ಆಧಾರರಹಿತ ಹಕ್ಕುಗಳನ್ನು ನಿರಾಕರಿಸುತ್ತವೆ ಎಂದು ಜಹ್ರಾ ಹೇಳಿದ್ದಾರೆ.

ಭಾರತ ತಿರುಗೇಟು
ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಹೇಳಿಕೆಗಳನ್ನು ಭಾರತತಿರಸ್ಕರಿಸಿದ್ದು, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಮತ್ತು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿರುತ್ತವೆ ಮತ್ತು ಬೇರೆ ಯಾವ ದೇಶಕ್ಕೂ ಈ ಬಗ್ಗೆ ಪ್ರತಿಕ್ರಿಯಿಸಲು ಅವಕಾಶವಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪದೇ ಪದೇ ಪ್ರತಿಪಾದಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!