ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲ ರವಿ ಅವರ ವಿರುದ್ಧ ಯಾವುದೇ ಹೇಳಿಕೆಗಳನ್ನು ನೀಡದಂತೆ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಂಗಳವಾರ ತಾಕೀತು ಮಾಡಿದ್ದಾರೆ .
ಇಂದು ಚೆನ್ನೈನಲ್ಲಿ ನಡೆದ ಶಾಸಕರ ಸಭೆಯಲ್ಲಿ ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ಯಾವುದೇ ಪೋಸ್ಟರ್ ಹಾಕದಂತೆ ಸ್ಟಾಲಿನ್ ತಮ್ಮ ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ.
ರಾಜ್ಯಪಾಲ ರವಿ ಅವರು ಇತ್ತೀಚಿಗೆ, ತಮಿಳುನಾಡು ಹೆಸರನ್ನು ‘ತಮಿಳಗಂ’ ಎಂದು ಬದಲಿಸುವಂತೆ ಸಲಹೆ ನೀಡಿದ್ದರು. ಇದುಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಮುಖ್ಯ ವಿರೋಧ ಪಕ್ಷ ಎಐಎಡಿಎಂಕೆ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ರಾಜ್ಯಪಾಲರ ವಿವಾದಾತ್ಮಕ ಹೇಳಿಕೆ ನಂತರ ಇಂದು ಪಶ್ಚಿಮ ಚೆನ್ನೈನ ವಳ್ಳುವರ್ ಕೊಟ್ಟಂ ಮತ್ತು ಅಣ್ಣಾ ಸಲೈ ಪ್ರದೇಶಗಳಲ್ಲಿ ‘ಗೆಟೌಟ್ ರವಿ’ ಎಂಬ ಪೋಸ್ಟರ್ಗಳು ಕಾಣಿಸಿಕೊಂಡಿವೆ.