ಹೊಸ ದಿಗಂತ ವರದಿ , ವಿಜಯಪುರ:
ಸಿದ್ಧೇಶ್ವರ ಶ್ರೀಗಳು ಆರೋಗ್ಯವಾಗಿ ಇದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ಜ್ಞಾನಯೋಗಾಶ್ರಮಕ್ಕೆ ಗುರುವಾರ ಸಂಜೆ ಭೇಟಿ ನೀಡಿ, ಸಿದ್ಧೇಶ್ವರ ಶ್ರೀಗಳು ಆರೋಗ್ಯವನ್ನು ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಆತಂಕ ಪಡಬಾರದು. ಸಿದ್ಧೇಶ್ವರ ಶ್ರೀಗಳ ಶಿಷ್ಯನಾಗಿ ಆಶ್ರಮಕ್ಕೆ ಬಂದಿದ್ದೇನೆ. ಶ್ರೀಗಳು ಸಿಎಂ ಬೊಮ್ಮಾಯಿ ಅವರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅಮಿತ ಶಾ ರಾಜ್ಯಕ್ಕೆ ಬಂದು ಹೋದಮೇಲೆ ಆಶ್ರಮಕ್ಕೆ ಬರುತ್ತಾರೆ ಎಂದರು.
ಇನ್ನು ಶ್ರೀಗಳ ಆಶಯದಂತೆ ಆಶ್ರಮದಲ್ಲಿಯೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸಿದ್ಧೇಶ್ವರ ಶ್ರೀಗಳು ಸ್ಪಂದಿಸುತ್ತಿದ್ದಾರೆ. ಅದಕ್ಕಾಗಿ ಯಾರು ಆತಂಕ ಪಡಬೇಡಿ ಎಂದರು.
ಅಲ್ಲದೇ, ಪಂಚಮಸಾಲಿ ಮೀಸಲಾತಿ ನೀಡಿರುವ ಮಾಹಿತಿ ನನಗೆ ಮಾಹಿತಿ ಇಲ್ಲ. ಕ್ಯಾಬಿನೆಟ್ಗೆ ನಾನು ಹೋಗದೇ ಶ್ರೀಗಳ ಭೇಟಿಗೆ ಬಂದಿದ್ದೇನೆ.
ಮಾಹಿತಿ ಪಡೆದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದರು.