ಹೊಸ ದಿಗಂತ ವರದಿ, ಕಲಬುರಗಿ:
ಕಲ್ಯಾಣ ಕನಾ೯ಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಜಿಲ್ಲೆಯ ಜೇವಗಿ೯ಯ ಶಾಸಕ ಡಾ.ಅಜಯ್ ಸಿಂಗ್ ಅವರನ್ನು ರಾಜ್ಯ ಸಕಾ೯ರ ಒಂದು ವರ್ಷದ ಕಾಲಾವಧಿಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ.
ಅದರಂತೆ ರಾಜ್ಯ ಸಭಾ ಸದಸ್ಯ ಸೈಯದ್ ನಾಜೀರ ಹುಸೇನ್,ವಿಧಾನ ಪರಿಷತ್ ಸದಸ್ಯ ಅರವಿಂದ್ ಅರಳಿ ಯಲಕನೂರ,ತಿಪ್ಪಣಪ್ಪಾ ಕಮಕನೂರ, ಶಾಸಕರಾದ ಡಾ.ಅಜಯ್ ಸಿಂಗ್, ಬಿ.ಆರ್.ಪಾಟೀಲ್, ರಾಜಾ ವೆಂಕಟಪ್ಪಾ ನಾಯಕ್, ಹಂಪನಗೌಡ ಬಾದಲಿ೯,ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ, ತುಕಾರಾಮ ಹಾಗೂ ಹೆಚ್.ಆರ್.ಗವಿಯಪ್ಪಾ ಅವರುಗಳನ್ನು ಕೆಕೆಆರಡಿಬಿ ಮಂಡಳಿಯ ಸದಸ್ಯರಗಳಾಗಿ ನಾಮನಿರ್ದೇಶನ ಮಾಡಿ ಸಕಾ೯ರ ಆದೇಶ ಹೊರಡಿಸಿದೆ.