ಡಾ. ಮಂಜುನಾಥ್ ಮನವೊಲಿಸಿದ್ರಾ ಎಚ್‌ಡಿಕೆ? ಸ್ಪರ್ಧೆ ಬಹುತೇಕ ಖಚಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ.ಸಿ.ಎನ್ ಮಂಜುನಾಥ್ ಅವರನ್ನು ಲೋಕಸಭಾ ಚುನಾವಣೆಗೆ ಸ್ಫರ್ಧಿಸುವಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮನವೊಲಿಸಿದ್ದಾರೆ ಎಂದು ಹೇಳಲಾಗಿದೆ.

ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಚಿಂತನೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ. ಸುರೇಶ್ ಸ್ಪರ್ಧೆ ಮಾಡಲಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಅಂತಿಮ ಮಾತುಕತೆ ನಡೆದಿದ್ದು, ಮಂಜುನಾಥ್ ಬಹುತೇಕ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಪಕ್ಷದ ಇತರರು ಕೂಡ ಮಂಜುನಾಥ್ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಒಲವು ತೋರಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. ದಯವಿಟ್ಟು ಬೇಡ ಡಾಕ್ಟರ್ ಮರ್ಯಾದೆ ಕಳೀಬೇಡಿ 🙏🏻

  2. ಡಾ ಮಂಜುನಾಥ ಪ್ರಸಿದ್ಧ ಹೃದಯ ತಜ್ಞರು ಇವರ ಸೇವೆ ಕೇವಲ ಮನುಕುಲಕ್ಕೆ ಮೀಸಲಾಗಿರಬೇಕು,, ಯಾರದ್ದೋ ರಾಜಕೀಯ ಮಹತ್ವಾಕಾಂಕ್ಷೆಗೆ ಅವರ ಪವಿತ್ರ ವೃತ್ತಿ ಗೌರವವೂ ಬಲಿಯಾಗಬಾರದು,,, ಅವರು ಈ ಒತ್ತಡವನ್ನು ಒಪ್ಪಿಕೊಳ್ಳಬಾರದು,,,ಇಂದಿನ ರಾಜಕೀಯ ವಾತಾವರಣ ಹೇಸಿಗೆ ಗಿಂತಲೂ ಗಬ್ಬು ನಾರುತ್ತಿದೆ ಅಂಥ ಕೆಸರಲ್ಲಿ ಡಾಕ್ಟರ್ ಬೀಳಬಾರದು,,, ಸರ್ಕಾರಕ್ಕೆ ಅವರ ವೃತ್ತಿಗೆ ಗೌರವ ಸಲ್ಲಿಸುವ ನಿಜ ಕಾಳಜಿ ಇದ್ದರೆ ದೇಶದ ಅತ್ಯುನ್ನತ ಆರೋಗ್ಯ ಸಂಸ್ಥೆಗಳಿವೆ ಅವುಗಳ ಉನ್ನತೀಕರಣ ಮಾಡಲು ಇವರ ಸೇವೆ ಪಡೆಯಬಹುದು

LEAVE A REPLY

Please enter your comment!
Please enter your name here

error: Content is protected !!