ಕಾರವಾರದಲ್ಲಿ ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತ, ಆತಂಕದಲ್ಲಿ ಜನ

ದಿಗಂತ ವರದಿ ಅಂಕೋಲಾ :

ಭಾರಿ ಮಳೆ ಅಬ್ಬರಕ್ಕೆ ಜಿಲ್ಲೆಯ ಕರಾವಳಿಯಲ್ಲಿ ಗುಡ್ಡ ಕುಸಿತ ಜೋರಾಗಿದ್ದು ಜನ ಆತಂಕಿತರಾಗಿದ್ದಾರೆ.
ಮಳೆಗೆ ಅಂಕೋಲಾ ಕುಮಟಾ ರಸ್ತೆಯಲ್ಲೂ ಗುಡ್ಡ ಕುಸಿದು ಸಮಸ್ಯೆಯಾಗಿದೆ.

ಕೋಡಸಣಿ- ಉಳವರೆಬಳಿ ಗಂಗಾವಳಿ ನದಿಯ ಪಕ್ಕದಲ್ಲೂ ಗುಡ್ಡ ಕುಸಿದು ಭಾರಿ ಸಮಸ್ಯೆ ಸೃಷ್ಟಿಯಾಗಿದೆ.ನದಿಯ ಅಕ್ಕ ಪಕ್ಕ ಗುಡ್ಡದ ಮಣ್ಣು ನಿಂತ ಪರಿಣಾಮ ನದಿಯ ಹಿನ್ನಿರಿನ ಪ್ರದೇಶಗಳ ಮನೆಗಳೊಳಗೆ ನೀರು ನುಗ್ಗಿ ಜನ ಬವಣೆಗೆ ಒಳಗಾಗಿದ್ದಾರೆ. ಕಳೆದ ಹತ್ತು ದಿನಗಳಿಂದ ಮಳೆ ಅವ್ಯಾಹತವಾಗಿ ಸುರಿಯುತ್ತಿದ್ದು ಜನ ತಲ್ಲಣಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!