ಭಾರೀ ಮಳೆಗು ಮೊದಲೇ ಮುನ್ನೆಚ್ಚರಿಕೆ, ಬಿಬಿಎಂಪಿ ಆಲಿಸುತ್ತೆ ನಿಮ್ಮ ಸಮಸ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಸಿಲಿಗೆ ಹೈರಾಣಾಗಿರುವ ರಾಜ್ಯದ ಜನತೆ ಮಳೆಗಾಗಿ ಎದುರು ನೋಡುತ್ತಿದ್ದಾರೆ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನ ಮಂದಿ ಮಳೆಗೆ ಹಪಹಪಿಸುತ್ತಿದ್ದಾರೆ. ಆದರೆ ಬೆಂಗಳೂರಿಗೆ ಹೆಚ್ಚು ಮಳೆ ಬಂದರೆ ಯಾವ ರೀತಿ ಪರಿಸ್ಥಿತಿ ಉಂಟಾಗುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕಾಗಿ ಬಿಬಿಎಂಪಿ ಹೆಲ್ಪ್‌ಲೈನ್‌ ಆರಂಭಿಸಲು ಮುಂದಾಗಿದೆ.

ಈ ಬಾರಿ ಮಳೆಗಾಲದಲ್ಲಿ ಜನರಿಗೆ 24/7 ಸಮಸ್ಯೆ ಆಲಿಸಲು ಜೋನ್ ವೈಸ್ ಟೀಂ ಸೆಟ್ ಮಾಡಲಾಗಿದೆ. ಜೋನಲ್ ಕಮಿಷನರ್ ಅಧೀನದಲ್ಲಿ ಈ ಟೀಂ ಕಾರ್ಯ ನಿರ್ವಹಿಸುತ್ತದೆ. 3 ಪಾಳಿಯಲ್ಲಿ ಕಂಟ್ರೋಲ್ ರೂಂ ಅಲ್ಲಿ ಕೆಲಸ ಮಾಡಲಿದ್ದು, ಸದಾ ಕಾರ್ಯ ಪ್ರವೃತ್ತರಾಗಿರುತ್ತಾರೆ.

ಸಹಾಯವಾಣಿಯಲ್ಲಿ, ಮರ ಬೀಳಲಿ, ನೀರು ತುಂಬಲಿ ಎಲ್ಲಾ ಸಮಸ್ಯೆಗೂ ತಾತ್ಕಾಲಿಕ ಪರಿಹಾರ ನೀಡುತ್ತಾರೆ. 859 ಕಿಮೀ ಪ್ರತೀ 3 ತಿಂಗಳು ರಾಜಕಾಲುವೆ ಕ್ಲೀನ್ ಮಾಡುವ ಟಾಸ್ಕ್ ಇದ್ದು, ಒಂದು ಟಾಸ್ಕ್ ಮುಗಿದರೆ ಮತ್ತೆ ಸೈಕ್ಲಿಂಗ್ ತರ ಕ್ಲೀನಿಂಗ್ ಕೆಲಸ ರಿಪೀಟ್ ಆಗುತ್ತದೆ.

ಜನರು ತಮ್ಮ ಸಮಸ್ಯೆಗಳನ್ನು ಹೇಳಿ, ಬಿಬಿಎಂಪಿ ಇಂದ ತ್ವರಿತ ಸಮಾಧಾನ ಸಿಗಲಿದ್ಯಾ? ಮಳೆ ಬಂದ ನಂತರ ಚಿತ್ರಣ ತಿಳಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!