ಹೊಸದಿಗಂತ ವರದಿ,ಬೀದರ್:
ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಿಲಾಲಪುರ ಹಾಗೂ ಸಕ್ಕರಗಂಜ ಗ್ರಾಮದ ಮಧ್ಯದಲ್ಲಿ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಭೂಕಂಪ ಸಂಭವಿಸಿದೆ, ರಿಕ್ಟರ್ ಮಾಪಕದ ಪ್ರಕಾರ ಭೂಮಿಯ ೫ ಕಿ.ಮಿ ಆಳದಲ್ಲಿ ೩.೫ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಜನ ಆತಂಕಗೊಂಡಿದ್ದಾರೆ. ಇದಕ್ಕೂ ಮುನ್ನ ತಾಲೂಕಿನ ಕುಮಾರ್ ಚಿಂಚೊಳಿ, ಹುಣಸನಾಳ, ಸಿತಾಳಗೇರಾ, ಗ್ರಾಮಗಳಲ್ಲಿ ಭೂಕಂಪ ದಂತೆ ಶಬ್ದ ಕೇಳಿ ಬರುತ್ತಿತ್ತು ಈಗ ಭೂಕಂಪ ಸಂಭವಿಸಿದ ನಂತರ ಜನ ಗಾಬರಿಗೊಂಡಿದ್ದಾರೆ.