ಹೊಸದಿಗಂತ ವರದಿ, ಮಡಿಕೇರಿ:
ದಕ್ಷಿಣ ಕನ್ನಡ ಕೊಡಗಿನ ಗಡಿ ಭಾಗದಲ್ಲಿ ಭಾನುವಾರ ಭೂಕಂಪನದ ತೀವ್ರತೆ ಹೊರಬಿದ್ದಿದ್ದು, ರಿಕ್ಟರ್ ಮಾಪಕದಲ್ಲಿ 1.8 ದಾಖಲಾಗಿದೆ.
ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್’ನಿಂದ 1.1 ಕಿ.ಮೀ. ಆಗ್ನೇಯ ದಿಕ್ಕಿನಲ್ಲಿ ಕೊಡಗಿನ ಗಡಿ ಭಾಗದಲ್ಲಿ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.
ಭೂಮಿಯ 10 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಗೂನಡ್ಕ ಗ್ರಾಮದಿಂದ 1.3 ಕಿ.ಮೀ. ಪಶ್ಚಿಮ ನೈರುತ್ಯ, ತೋಡಿಕಾನ ಗ್ರಾಮದಿಂದ 3.3 ಕಿ.ಮೀ. ಉತ್ತರಕ್ಕೆ ಹಾಗೂ ಸುಳ್ಯದಿಂದ 10.47 ಕಿ.ಮೀ. ಆಗ್ನೇಯ ದಿಕ್ಕಿನಲ್ಲಿ ಕೇಂದ್ರ ಬಿಂದು ಗುರುತಿಸಲಾಗಿದೆ.
ಸುಮಾರು 20 ರಿಂದ 30 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಿರಬಹುದೆಂದು ಅಂದಾಜಿಸಲಾಗಿದೆ.
ಒಂದೆಡೆ ವ್ಯಾಪಕ ಮಳೆ ಹಾಗೂ ಮತ್ತೊಂದೆಡೆ ಸರಣಿ ಭೂಕಂಪನದಿಂದಾಗಿ ಗಡಿ ಭಾಗದ ಚೆಂಬು, ಸಂಪಾಜೆ ಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ