ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಸಮೀಪದ ಗುರುಗ್ರಾಮ್ನ ರಸ್ತೆಯಲ್ಲಿ ಕಿಯಾ ಕಾರಿನ ಮಾಲೀಕರೊಬ್ಬರು ಹೂವಿನ ಕುಂಡಗಳನ್ನು ಕದಿಯುತ್ತಿರುವ ವಿಡಿಯೋ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ಕಾರಿನ ಬೆಲೆ 40 ಲಕ್ಷ ರುಪಾಯಿ ನೂರು ರೂಪಾಯಿ ಕೊಟ್ಟು ಹೂವಿನ ಕುಂಡ ತೆಗೆದುಕೊಳ್ಳೋಕಾಗಲ್ವಾ ಎಂದು ಟೀಕಿಸುತ್ತಿದ್ದಾರೆ. ಏತನ್ಮಧ್ಯೆ, ಈ ಘಟನೆಯ ಬಗ್ಗೆ ಗುರುಗ್ರಾಮ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 15 ಹೂವಿನ ಕುಂಡಗಳನ್ನು ಕದ್ದವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48 ರ ಶಂಕರ್ ಚೌರಸ್ತಾದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಇಡೀ ವಿಷಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಕಾರಿನ ಮೇಲೆ ವಿಐಪಿ ಸಂಖ್ಯೆ ಇರುವುದರಿಂದ ನೆಟಿಜನ್ಗಳು ಸರ್ಕಾರಿ ಅಧಿಕಾರಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಆ ಕಾರು ಎಲ್ವಿಸ್ ಯಾದವ್ ಎಂಬ ಯೂಟ್ಯೂಬರ್ ಅನ್ನು ನೆಟ್ನಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ. 40 ಲಕ್ಷದ ಕಾರಿನಲ್ಲಿ ಓಡಾಡುವ ಆ ವ್ಯಕ್ತಿಗೆ ಗಿಡಗಳನ್ನು ಖರೀದಿಸಲು ಕನಿಷ್ಠ 40 ರೂ. ಸಿಕ್ಕಿಲ್ವಾ ಎಂದು ನೆಟ್ಟಿಗರು ಸಿಟ್ಟಿಗೆದ್ದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಗುರುತಿಸಿದ ಗುರುಗ್ರಾಮ್ ಡೆಪ್ಯುಟಿ ಕಮಿಷನರ್ (ಡಿಸಿ) ನಿಶಾಂತ್ ಕುಮಾರ್ ಯಾದವ್, ಕಳ್ಳತನದ ವಿರುದ್ಧ ಔಪಚಾರಿಕ ದೂರು ದಾಖಲಿಸಲು ಗುರುಗ್ರಾಮ್ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿ (ಜಿಎಂಡಿಎ) ಗೆ ಸೂಚಿಸಿದರು. ಕದ್ದ ಸಸ್ಯಗಳಲ್ಲಿ ಹೈಡ್ರೇಂಜ, ಡೇಲಿಯಾ ಮತ್ತು ಮಾರಿಗೋಲ್ಡ್ ಸಸ್ಯಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. G20 ಸಮಾವೇಶದ ಅಂಗವಾಗಿ ನಗರದಲ್ಲಿ ಮಾರ್ಚ್ 1ರಿಂದ 4ರವರೆಗೆ ನಡೆಯಲಿರುವ ಸಮಾವೇಶಕ್ಕೆ ಶಂಕರಚೌಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರಗೊಳಿಸಲು ಹೂಕುಂಡಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಯಾದವಾಡ ತಿಳಿಸಿದರು.
गुरुग्राम #G20 के सौंदर्यीकरण के लिए मंगाए गए गमले को चुराने वाले की गाड़ी का पता चल गया है। ये कोई और नही बल्कि यूट्यूबर @ElvishYadav इस गाड़ी से चलता था। सारे सबूत थ्रेड में उपलब्ध हैं। 👇#GamlaChor pic.twitter.com/tgcooxwuNp
— Prof. इलाहाबादी ( نور ) (@ProfNoorul) February 28, 2023