ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರಕಿಹೊಳಿ ಬ್ರದರ್ಸ್ ಹಿರಿಯ ಸಹೋದರಿ ಲಗಮವ್ವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋಕಾಕ ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಲಗಮವ್ವ ಅವರು ಗೋಕಾಕ ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಇಂದು ಅಂತ್ಯಕ್ರಿಯೆ ನಡೆಯಲಿದೆ.
ಸಚಿವ ಸಂಪುಟ ಸಭೆಯ ಕಾರಣ ಸತೀಶ್ ಜಾರಕಿಹೊಳಿ ಅಂತ್ಯಕ್ರಿಯೆಗೆ ಗೈರಾಗಲಿದ್ದಾರೆ. ಮನಸ್ಸಿಗೆ ಅತೀ ನೋವಾಗುತ್ತಿದೆ. ನನ್ನನ್ನು ಮಗನ ರೀತಿ ಸಲಹಿದ್ದರು. ನನ್ನ ರಾಜಕೀಯ ಬೆಳವಣಿಗೆಗೆ ಅವರೇ ಕಾರಣ, ತೀವ್ರ ಆಘಾತವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.