ಬನ್ನೇರುಘಟ್ಟ ಉದ್ಯಾನದಲ್ಲಿ ನಿನ್ನೆ ಮರಿಯಾನೆ, ಇಂದು ತಾಯಿ ಆನೆ ಸಹ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿನ್ನೆ ತಾಯಿ ಆನೆಯ ಭ್ರೂಣದಲ್ಲೇ ಮರಿಯಾನೆ ಮೃತಪಟ್ಟಿತ್ತು. ಇದರ ಬೆನ್ನಲ್ಲೇ ಇದೀಗ ಇಂದು ಮಧ್ಯಾಹ್ನ 12:13ಕ್ಕೆ 47 ವರ್ಷದ ಸುವರ್ಣ ಆನೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ.

ನಿನ್ನೆ ಭ್ರೂಣದಲ್ಲೇ ಮರಿ ಮೃತಪಟ್ಟಿತ್ತು, ಪ್ರಾಣಿ‌ ಶಸ್ತ್ರ ‌ಚಿಕಿತ್ಸೆ ತಜ್ಞರ ನೆರವಿನಿಂದ ಚಿಕಿತ್ಸೆ ನೀಡಿ, ಆಪರೇಶನ್ ಮಾಡುವ ಮೂಲಕ ಮೃತಪಟ್ಟ ಮರಿಯನ್ನ ಪಶುವೈದ್ಯರು ತೆಗೆದಿದ್ದರು.

ಆದರೆ ಮರಿಯಾನೆ ಮೃತಪಟ್ಟಿದ್ದರಿಂದ ಆನೆ ದೇಹದಲ್ಲಿ ಇನ್ಫೆಕ್ಷನ್ ಹರಡಿಕೊಂಡು ಇದೀಗ ಚಿಕಿತ್ಸೆಗೆ ಸ್ಪಂದಿಸದೆ ತಾಯಿ ಆನೆ ಕೂಡ ಮೃತಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!