ಹೊಸದಿಗಂತ ವರದಿ,ಕಲಬುರಗಿ:
ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ಪಕ್ಷದ ಬಲವದ೯ನೆಗೆ ಎಲ್ಲರೂ ಒತ್ತು ನೀಡಬೇಕಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಕಾಯ೯ಕತ೯ರಿಗೆ ಕಿವಿ ಮಾತು ಹೇಳಿದರು.
ಅವರು ನಗರದ ಹೊರವಲಯದ ಶ್ರೀ ಸ್ವಾಮಿ ನಾರಾಯಣ ಗುರುಕುಲ್ ಶಾಲೆಯಲ್ಲಿ ಮೂರು ದಿನಗಳ ನಡೆದ ಬಿಜೆಪಿ ಮಹಾ ನಗರ ಜಿಲ್ಲಾ ಕಾಯ೯ಕಾರಿಣಿ ಅಂತಿಮ ದಿನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪಕ್ಷದ ಕಾಯ೯ಕಾರಿಣಿ ಸಭೆಯೂ, ಪಕ್ಷದ ಸಂಘಟನೆಯ ದೃಷ್ಟಿಯಿಂದ ಹಮ್ಮಿಕೊಳ್ಳಲಾಗುತ್ತದೆ.ಹೀಗಾಗಿ ಈ ಕಾಯ೯ಕಾರಿಣಿ ಸಭೆಗಳಲ್ಲಿ ಎಲ್ಲ ಅಪೇಕ್ಷಿತರು ಸಾಮಾನ್ಯ ಕಾಯ೯ಕತ೯ರಂತೆ ಭಾಗವಹಿಸಬೇಕೆಂದು ಹೇಳಿದರು.
ನಗರ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಮಾತನಾಡಿ, ಅಭ್ಯಾಸ ವಗ೯ವೂ ಕೆಲವರಿಗೆ ಹೊಸದಿದೆ,ಇನ್ನೂ ಕೆಲವರಿಗೆ ಹಳೆದು, ಪಕ್ಷದ ಸಂಘಟನೆ ದೃಷ್ಟಿಯಿಂದ ಕಾಯ೯ಕಾರಿಣಿ ಸಭೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ರೆಡಲ ಅಧ್ಯಕ್ಷ ಚಂದು ಪಾಟೀಲ್,ವಿಭಾಗೀಯ ಸಹ ಸಂಘಟನಾ ಕಾಯ೯ದಶಿ೯ ಸೂಯ೯ಕಾಂತ ಡೋಣಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಹಾದೇವ ಬೆಳಮಗಿ,ಉಮೇಶ್ ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಅಪ್ಪು ಕಣಕಿ,ಶಂಭುಲಿಂಗ ಬಳಬಟ್ಟಿ,ರಾಮಚಂದ್ರ ಗುಮ್ಮಟ್ ಸೇರಿದಂತೆ ಹಲವು ಪಾಲಿಕೆ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು