ದೇಶದ್ರೋಹ ಚಟುವಟಿಕೆ ನಡೆಸುತ್ತಿರುವವರನ್ನು ಎನ್ ಕೌಂಟರ್ ಮಾಡಿ ಬಿಸಾಕಿ: ಪ್ರಮೋದ್ ಮುತಾಲಿಕ್ ಆಗ್ರಹ

ಹೊಸದಿಗಂತ ವರದಿ, ಮೈಸೂರು:

ದೇಶ ದ್ರೋಹಿಗಳ ವಿರುದ್ಧ ಕೇಸ್‌ಗಳನ್ನು ಹಾಕಿದರೂ, ಅವರು ನ್ಯಾಯಾಲಯದಿಂದ ಜಾಮೀನು ಪಡೆದು, ಮತ್ತೆ ಅದೇ ದೇಶ ದ್ರೋಹ ಕೆಲಸವನ್ನು ಮತ್ತಷ್ಟು ಮಾಡುತ್ತಿದ್ದಾರೆ. ಹಾಗಾಗಿ ದೇಶ ದ್ರೋಹಿಗಳನ್ನು ಸರ್ಕಾರ ಕೂಡಲೇ ಎನ್‌ಕೌಂಟರ್ ಮಾಡಿ ಬಿಸಾಕಬೇಕು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಶನಿವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮದಲ್ಲಿ ಛೋಟಾ ಪಾಕಿಸ್ತಾನ್ ಎಂದು ಘೋಷಣೆ ಕೂಗಿದ ಆರೋಪಿಗಳನ್ನ ಎನ್ ಕೌಂಟರ್ ಮಾಡಿ ಬಿಸಾಕಬೇಕು.
ಛೋಟಾ ಪಾಕಿಸ್ತಾನ ಘೋಷಣೆ ಹಿಂದೆ ಮೌಲ್ವಿಯ ಕೈವಾಡ ಇದೆ. ಮೌಲ್ವಿಯ ಪ್ರಚೋದನಾಕಾರಿ ಭಾಷಣದಿಂದಲೇ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಕ್ಷಣವೇ ಮೌಲ್ವಿಯನ್ನು ಬಂಧಿಸಬೇಕು ಎಂದು ಒತ್ತಾಯಿದರು. ಈ ಪ್ರಕರಣದಲ್ಲಿ ಕೇವಲ ಇಬ್ಬರನ್ನು ಬಂಧಿಸಿ ಕಣ್ಣೋರುಸುವ ತಂತ್ರ ಮಾಡಬಾರದು, ನಾಟಕವಾಡಬಾರದು, ಪ್ರಾಮಾಣಿಕವಾಗಿ ಪೊಲೀಸರು ಕೆಲಸ ಮಾಡಬೇಕು ಎಂದರು.
ದೊಡ್ಡ ಕವಲಂದೆ ಭಾಗದಲ್ಲಿ ಶೇ.60ರಷ್ಟು ಮುಸ್ಲಿಂರಿದ್ದಾರೆ. ಆದ್ದರಿಂದ ಈ ರೀತಿ ಕೋಮು ದ್ವೇಷವನ್ನು ಸೃಷ್ಟಿಸುವ ಹುನ್ನಾರ ನಡೆದಿದೆ. ಘೋಷಣೆ ಕೂಗಿದವರನ್ನ ಎನ್ ಕೌಂಟರ್ ಮಾಡಬೇಕು.
ಕವಲಂದೆ ಪ್ರಕರಣ ಕುರಿತು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಿಂದೂ ಸಂಘಟನೆಗಳಿAದ ಕವಲಂದೆ ಚಲೋ ಅಭಿಯಾನವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇಶದ್ರೋಹಿಗಳು ಈ ದೇಶದ ಅನ್ನವನ್ನು ತಿಂದು, ಸೌಲಭ್ಯ, ಸೌಕರ್ಯಗಳನ್ನು ಪಡೆದು ಅನುಭವಿಸಿ, ದೇಶದ ವಿರುದ್ಧವೇ ಮಸಲತ್ತು ನಡೆಸುತ್ತಿದ್ದಾರೆ. ಮುಸ್ಲಿಮರ ಹಿಡನ್ ಅಜೆಂಡಾ ಹೊರಬರುತ್ತಿದೆ. ಇಡೀ ಭಾರತ ದೇಶವನ್ನು ಇಸ್ಲಾಮೀಕರಣ ಮಾನಸಿಕತೆ ಹೊರ ಬರುತ್ತಿದೆ. ಇನ್ನು ಮೇಲೆ ದೇಶ ದ್ರೋಹಿಗಳ ಆಟ ನಡೆಯಲಿಕ್ಕಿಲ್ಲ. ಅವರ ವಿರುದ್ಧ ಉಗ್ರ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ದೇಶ ದ್ರೋಹದ ಕೇಸ್‌ನಲ್ಲಿ ಜಾಮೀನು ಪಡೆದು, ಮತ್ತೆ ವಿಷ ಕಾರುತ್ತಿದ್ದಾರೆ. ಕ್ಯಾನ್ಸರ್‌ನಂತೆ ಹರಡುವ ಪ್ರಯತ್ನ ನಡೆಸುತ್ತಿದ್ದಾರೆ. ಹಾಗಾಗಿ ದೇಶ ದ್ರೋಹಿಗಳನ್ನು ಹದ್ದುಬಸ್ತಿನಲ್ಲಿಡಲು, ಎನ್ ಕೌಂಟರ್ ಮಾಡಬೇಕು. ದೇಶದ್ರೋಹಿಗಳ ವಿರುದ್ಧ ಯಾರಾದರೂ ದೂರು ನೀಡಲಿ ಎಂದು ಪೊಲೀಸರು ಕಾಯಬಾರದು, ಸುಮೋಟೋ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಹೋರಾಟ ಆಜಾನ್ ವಿರುದ್ಧ ಅಲ್ಲ, ಅದರಿಂದ ಹೊರ ಬರುವ ಶಬ್ದದ ವಿರುದ್ಧ. ಅವರು ಆಜಾನ್ ಕೂಗಿದರೆ ನಾವು ಸುಪ್ರಭಾತ ಹಾಡುತ್ತೇವೆ. ಮೇ 9ರಿಂದ ಎಲ್ಲಾ ದೇವಸ್ಥಾನಗಳಲ್ಲಿ ಸುಪ್ರಭಾತ ಅಭಿಯಾನ ನಡೆಯಲಿದೆ. ಯಾವುದೇ ಕಾರಣಕ್ಕೂ ಇದು ನಿಲ್ಲುವುದಿಲ್ಲ ಎಂದು ಗುಡುಗಿದರು.
ಸುಪ್ರೀಂಕೋರ್ಟ್ ಆದೇಶದಂತೆ ನಂಜನಗೂಡಿನ ಹುಚ್ಚಗಣಿ ಮಾರಮ್ಮನ ದೇವಸ್ಥಾನ ಒಡೆಯುತ್ತಾರೆ. ಅದೇ ಆದೇಶದಂತೆ ಮಸೀದಿ ಮೇಲಿನ ಮೈಕ್‌ನ್ನು ರಾಜ್ಯದಲ್ಲಿ ಯಾಕೆ ತೆಗೆಯುತ್ತಿಲ್ಲ. ಯಾರ ಶಾಂತಿಗೂ ಭಂಗ ತರುವ ಕೆಲಸವನ್ನ ಹಿಂದೂಗಳು ಮಾಡುವುದಿಲ್ಲ. ಶಾಂತಿಭAಗವಾಗುತ್ತಿರುವುದು ಮುಸ್ಲಿಮರಿಂದ ಎಂದು ದೂರಿದರು.
ಒಂದು ವೇಳೆ ಮುಸ್ಲಿಮರು ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ ಹೊಣೆ. ಇದಕ್ಕೆಲ್ಲ ಸರ್ಕಾರದ ದುರ್ಬಲತೆಯೇ ಕಾರಣ. ಹಿಂದೂಗಳು ನಿಮಗೆ ಮತ ಕೊಟ್ಟಿದ್ದು, ಇದೆಲ್ಲವನ್ನು ಸರಿ ಮಾಡಲಿ. ನಿಮಗೆ ಆಗಲಿಲ್ಲ ಎಂದರೆ ನಮಗೆ ಬಿಟ್ಟುಬಿಡಿ. ಒಂದೇ ದಿನದಲ್ಲಿ ಎಲ್ಲಾ ಸದ್ದನ್ನ ನಾವು ಅಡಗಿಸುತ್ತೇವೆ ಎಂದು ಸವಾಲೆಸದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!