ಆಸ್ತಿಗಾಗಿ ಸಂಬoಧಿಕರ ನಡುವೆ ನಡೆದ ಜಗಳ ಮಹಿಳೆಯ ಕೊಲೆಯಲ್ಲಿ ಅಂತ್ಯ

ಹೊಸದಿಗಂತ ವರದಿ,ಮೈಸೂರು:

ಆಸ್ತಿ ವಿಚಾರವಾಗಿ ಸಂಬoಧಿಕರ ನಡುವೆ ನಡೆದ ಗಲಾಟೆ ಮಹಿಳೆಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಹಿನಕಲ್ ಗ್ರಾಮದ ನಾಯಕರ ಬೀದಿಯಲ್ಲಿ ನಡೆದಿದೆ.
ಸಾಕಮ್ಮ (೫೦) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿಗಳಾದ ಮನು, ಗೋವಿಂದನಾಯಕ, ಕಿರಣ್,ಲಕ್ಷ್ಮಿ ಎಂಬುವರನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮನೋಜ್ ಪರಾರಿಯಾಗಿದ್ದಾನೆ
ಹಿನಕಲ್ ಗ್ರಾಮದ ದಾಸನಾಯಕ ಎಂಬುವರ ಪತ್ನಿ ಸಾಕಮ್ಮ ಹಾಗೂ ಆರೋಪಿಗಳ ನಡುವೆ ಮನೆ ಕಟ್ಟುವ ವಿಚಾರದಲ್ಲಿ ತಗಾದೆ ಇತ್ತೆಂದು ಹೇಳಲಾಗಿದೆ.ಇದೇ ವಿಚಾರದಲ್ಲಿ ಶುಕ್ರವಾರ ಶುರುವಾದ ಗಲಾಟೆ ವಿಕೋಪಕ್ಕೆ ಹೋದಾಗ, ಆರೋಪಿಗಳು ಚಾಕುವಿನಿಂದ ಸಾಕಮ್ಮಳ ಕುತ್ತಿಗೆ ಕೂಯ್ದು ಕೊಲೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!