ಇಂಜಿನ್ ಸ್ಥಗಿತಗೊಂಡು ಮುಳುಗಿದ ಬೋಟ್: ಕೋಟ್ಯಂತರ ರೂಪಾಯಿ ಹಾನಿ

ಹೊಸದಿಗಂತ ವರದಿ ಅಂಕೋಲಾ:

ಮೀನುಗಾರಿಕೆ ಬೋಟೊಂದು ಇಂಜಿನ್ ಸ್ಥಗಿತಗೊಂಡು ಸಮುದ್ರದಲ್ಲಿ ಮುಳುಗಿ ಕೋಟ್ಯಾಂತರ ರೂಪಾಯಿ ಹಾನಿಯಾದ ಘಟನೆ ತಾಲೂಕಿನ ಹಾರವಾಡ ಸಮೀಪದ ಸಮುದ್ರ ವ್ಯಾಪ್ತಿಯಲ್ಲಿ ನಡೆದಿದೆ.

ಮುದಗಾದ ಮೀನುಗಾರಿಕೆ ಜೆಟ್ಟಿಯಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ ಇಂದು ಚಂದ್ರ ತಾಂಡೇಲ್ ಮಾಲಿಕತ್ವದ ಇಂಡ್ ಕೆ.ಎ07 ಎಂ.ಎಂ 1587 ನೋಂದಣಿ ಸಂಖ್ಯೆಯ ಓಂ ನಮೋ ಶಿವಾಯ ಹೆಸರಿನ ಬೋಟ್ ಕುಕ್ಕಡೇಶ್ವರ ಗುಡ್ಡದ ಬಳಿ ಬಲೆ ಬೀಸಿ ಎಳೆಯುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೊಷದಿಂದ ಬೋಟಿನ ಇಂಜಿನ್ ಸ್ಥಗಿತಗೊಂಡಿದ್ದು ಗಾಳಿಯ ರಭಸಕ್ಕೆ ಸಿಲುಕಿದ ಬೋಟು ಸಮುದ್ರದಲ್ಲಿ ಮುಳುಗಿದೆ.

ಬೋಟಿನಲ್ಲಿ ಇದ್ದ 17 ಜನ ಮೀನುಗಾರರನ್ನು ಬೇರೆ ಬೋಟಿನ ಮೂಲಕ ರಕ್ಷಣೆ ಮಾಡಲಾಗಿದ್ದು ಸುಮಾರು 1.19 ಕೋಟಿ ರೂಪಾಯಿ ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!