May 5, 2026
Tuesday, May 5, 2026
spot_img

AAP ತೊರೆದರೂ ತಪ್ಪಿಲ್ಲ ಕಿರುಕುಳ: ರಾಷ್ಟ್ರಪತಿಗಳ ಮೊರೆ ಹೋದ ಚಡ್ಡಾ & ಗ್ಯಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವದೆಹಲಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿ ಸೇರಿರುವ ಸಂಸದರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿಬಂದಿದೆ.

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ಇತರೆ ಸಂಸದರು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಈ ಕುರಿತು ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಆಪ್ ನೇತೃತ್ವದ ಪಂಜಾಬ್ ಸರ್ಕಾರ “ಪ್ರತೀಕಾರ ರಾಜಕೀಯ” ನಡೆಸುತ್ತಿದೆ ಮತ್ತು ರಾಜ್ಯ ಯಂತ್ರಾಂಗವನ್ನು ದುರುಪಯೋಗಪಡಿಸಿಕೊಂಡು ಪಕ್ಷ ತೊರೆದವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಭೆಯ ನಂತರ ಮಾತನಾಡಿದ ಚಡ್ಡಾ, ಪಕ್ಷದಲ್ಲಿದ್ದಾಗ ತಮ್ಮನ್ನು “ಸಂಸ್ಕಾರಿಗಳು” ಎಂದು ಕರೆದವರು, ಹೊರಬಂದ ನಂತರ “ಭ್ರಷ್ಟರು” ಎಂದು ಲೇಬಲ್ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ರಾಜಕೀಯ ಹಕ್ಕನ್ನು ಬಳಸಿಕೊಂಡು ಪಕ್ಷ ತೊರೆದಿರುವುದನ್ನು ತಪ್ಪಾಗಿ ಚಿತ್ರಿಸಲಾಗುತ್ತಿದೆ ಎಂದರು.

ಇದನ್ನೂ ಓದಿ:

ಅವರು ಇನ್ನೂ ಕೆಲವು ಮಾಜಿ ಸಂಸದರು, ಹರ್ಭಜನ್ ಸಿಂಗ್ ಮತ್ತು ಉದ್ಯಮಿ ರಾಜೇಂದ್ರ ಗುಪ್ತ ಅವರ ಮೇಲೆ ಒತ್ತಡ ಹಾಗೂ ಕಾರ್ಯಾಚರಣಾ ಅಡಚಣೆಗಳಿವೆ ಎಂದು ಆರೋಪಿಸಿದ್ದಾರೆ. ಏಪ್ರಿಲ್ 24ರಂದು ಬಿಜೆಪಿ ಸೇರಿದ್ದ ನಂತರ ಈ ಘಟನೆಗಳು ಹೆಚ್ಚಾಗಿವೆ ಎಂದು ಅವರು ಹೇಳಿದರು. ಈ ಬೆಳವಣಿಗೆ ದೇಶದ ರಾಜಕೀಯ ವಲಯದಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !