ಎಲ್ಲರಿಗೂ ಇದೆ ಮುಖ್ಯಮಂತ್ರಿ ಆಗುವ ಅವಕಾಶ, ಅರ್ಹತೆ: ಸಚಿವ ಸುಧಾಕರ್

ಹೊಸದಿಗಂತ ವರದಿ , ವಿಜಯಪುರ:

ಎಲ್ಲರಿಗೂ ಮುಖ್ಯಮಂತ್ರಿ ಆಗುವ ಅವಕಾಶ, ಅರ್ಹತೆಯಿದೆ. ಸದ್ಯ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹೇಳಿದರು.

ದಲಿತ ಮುಖ್ಯಮಂತ್ರಿ ಕೂಗು ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಆಸೆ ಆಕಾಂಕ್ಷೆಗಳಿರೋದು ಸಹಜ. ಅಂತಹ ಪರಿಸ್ಥಿತಿ ಬಂದಾಗ ಅವಕಾಶ ಎಲ್ಲರಿಗೂ ಆಗುತ್ತದೆ ಎಂದರು.

ದೊಡ್ಡ ಮೊತ್ತದ ಗ್ಯಾರಂಟಿಗಳ ನಡುವೆ ಸರ್ಕಾರ ನಡೆಸುವುದು ಸುಲಭದ ಮಾತಲ್ಲ. ಸಂಪನ್ಮೂಲಗಳನ್ನ ಯಾವ ಯಾವ ರೂಪದಲ್ಲಿ ಶೇಖರಣೆ ಮಾಡಬೇಕೆಂಬುದನ್ನ ಸಾಬೀತು ಮಾಡುತಿದ್ದಾರೆ. 15 ಬಜೆಟ್ ಗಳನ್ನ ಮಂಡನೆ ಮಾಡಿದ ಅನುಭವಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ಸುಭದ್ರವಾಗಿದೆ ಎಂದರು.

ಲೋಕಸಭಾ ಚುನಾವಣೆಯ ಬಳಿಕ ಸರ್ಕಸರ ಬೀಳುತ್ತದೆ ಎಂಬ ಶಾಸಕ ಯತ್ನಾಳ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಯತ್ನಾಳ ಸಾಹೇಬರು ನನಗೆ ಆತ್ಮೀಯರು, ಯತ್ನಾಳ ಅವಾಗಾವಾಗ ಇಂತಹ ಬಾಂಬ್ ಸಿಡಿಸುತ್ತಾರೆ. ಯತ್ನಾಳ್ ಬಾಂಬು ಸಿಡಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಯತ್ನಾಳ ಅವರು ನಮಗಿಂತ ಸ್ವಪಕ್ಷಿಯರ ಮೇಲೆಯೇ ಹೆಚ್ಚು ಬಾಂಬ್ ಹಾಕುತ್ತಾರೆ. ಹಾಗಾಗಿ ಯತ್ನಾಳ ಅವರ ಪಕ್ಷದವರೇ ಎಚ್ಚರಿಕೆಯಿಂದ ಇರಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!