ಹೊಸದಿಗಂತ ವರದಿ , ಹುಬ್ಬಳ್ಳಿ:
ದಲಿತರು ಮುಖ್ಯಮಂತ್ರಿ ಆದರೆ ತಪ್ಪೇನಿದೆ. ಕಾಂಗ್ರೆಸ್ ಅಷ್ಟೇ ಅಲ್ಲದೇ ಎಲ್ಲ ಪಕ್ಷಗಳಲ್ಲಿಯೂ ದಲಿತರು ಸಿಎಂ ಆಗಬೇಕು ಎಂದು ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಸದ್ಯ ಖಾಲಿ ಇಲ್ಲ. ಮುಂದೆ ಏನಾದರೂ ಖಾಲಿ ಆದಾಗ ಸಿಎಂ ಯಾರು ಆಗಬೇಕು ಎಂಬ ನಿರ್ಧಾರ ಹೈಕಮಾಂಡ್ ಮಾಡುತ್ತದೆ ಎಂದರು.
ಕಾಂಗ್ರೆಸ್ ಯಾವಗಲೂ ದಲಿತರು, ಅಲ್ಪಸಂಖ್ಯಾತರ ಹಾಗೂ ಶೂಷಿತ ವರ್ಗದವರಿಗೆ ಶಕ್ತಿ ನೀಡುವ ಕಾರ್ಯ ಮಾಡುತ್ತಿದೆ. ಮುಖ್ಯಮಂತ್ರಿ ಆಗಬೇಕು ಎಂಬುವುದು ಎಲ್ಲ ಸಮಾಜದವರಿಗೆ ಇರುತ್ತದೆ. ಆದ್ದರಿಂದ ತಮ್ಮ ಬೇಡಿಕೆ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ತೃಷ್ಟೀಕರಣ ಮಾಡುವ ಕೆಲಸ ಮಾಡಿಲ್ಲ. ಬಿಜೆಪಿ ಅವರು ಆ ರೀತಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಸಯ್ಯದ ನಾಸೀರ್ ಹುಸೇನ ಕೂಗಿದಾರಾ? ಇಲ್ಲ ನಾವು ಕೂಗಿದೇವಾ? ಬಿಜೆಪಿ ಅವರು ಯಾಕೇ ಕೂಗಿರಬಾರದು ಎಂದು ಪ್ರಶ್ನಿಸಿದ ಅವರು, ದೇಶ ವಿರೋ ಕೆಲಸ ಯಾರೇ ಮಾಡಲಿ ಅದು ತಪ್ಪು. ಅಂತಹ ಕೆಲಸ ಮಾಡಿದವರನ್ನು ಒದ್ದು ಒಳಗೆ ಹಾಕಬೇಕು ಎಂದರು.
ಬಿಜೆಪಿ ಯಾವತ್ತು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಚುನಾವಣೆ ಮಾಡಿಲ್ಲ. ಭಾವನಾತ್ಮ ವಿಚಾರದ ಮೇಲೆ ಅವರು ಜಾಸ್ತಿ ಚುನಾವಣೆ ಮಾಡಿದ್ದು, ಸಂವಿಧಾನ ಬದಲಾವಣೆ ಹೇಳಿಕೆ ದೇಶ ದಹ ಕೆಲಸ ಎಂದು ಹರಿಹಾಯ್ದರು.