CINE | ಈ ಕಾರಣಕ್ಕೆ ರಣ್‌ಬೀರ್ ಎಲ್ಲರಿಗೂ ಇಷ್ಟ, ಮಕ್ಕಳಿಗಾಗಿ ಏನ್ ಮಾಡಿದ್ರು ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದೇ ಜೂನ್ 16 ರಂದು ಪ್ರಭಾಸ್ ಹಾಗೂ ಕೃತಿ ಸೆನೊನ್ ಅಭಿನಯದ ಆದಿಪುರುಷ್ ಸಿನಿಮಾ ತೆರೆಗೆ ಬರಲಿದೆ.

ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ವ್ಯಕ್ತವಾಗಿದ್ದು, ಈ ಸಿನಿಮಾ ಸಂಬಂಧಿತವಾಗಿ ರಣ್‌ಬೀರ್ ಕಪೂರ್ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಬಡಮಕ್ಕಳಿಗಾಗಿ 10 ಸಾವಿರ ಟಿಕೆಟ್‌ಗಳನ್ನು ರಣ್‌ಬೀರ್ ಖರೀದಿಸಿದ್ದು, ಬಡಮಕ್ಕಳು ಕೂಡ ಸಿನಿಮಾ ನೋಡಬೇಕು, ಅವರಿಗೂ ರಾಮಾಯಣದ ಬಗ್ಗೆ ತಿಳಿಸಬೇಕು ಎಂದಿದ್ದಾರೆ.

ಈ ಬಗ್ಗೆ ಕಮೆಂಟ್‌ಗಳು ಎದುರಾಗಿದ್ದು, ಇದೆಲ್ಲಾ ಸುಮ್ನೆ ಬಿಲ್ಡಪ್ ಕೂಡ ಎನಿಸುತ್ತಿದೆ, ಇನ್ನೇನು ಸ್ವಲ್ಪವೇ ದಿನಗಳಲ್ಲಿ ರಣ್‌ಬೀರ್ ಹಾಗೂ ಆಲಿಯಾ ಕೂಡ ರಾಮಾಯಣಕ್ಕೆ ಸಂಬಂಧಿಸಿದ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಹಾಗಾಗಿ ಈಗಿಂದಲೇ ಪ್ರಮೋಷನ್ಸ್ ಎಂದು ಕಾಲೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!