Sunday, December 3, 2023

Latest Posts

ರಾಕ್ಷಸ ಗುಣ ಬಿಟ್ಟು ದೈವ ಗುಣದತ್ತ ಪ್ರತಿಯೊಬ್ಬರೂ ಸಾಗಬೇಕು: ಶಾಸಕ ಜಿ.ಟಿ.ದೇವೇಗೌಡ

ಹೊಸದಿಗಂತ ವರದಿ ಮೈಸೂರು:

ನಮ್ಮಲ್ಲಿರುವ ರಾಕ್ಷಸ ಗುಣಬಿಟ್ಟು ದೈವ ಗುಣದತ್ತ ಎಲ್ಲರೂ ಸಾಗಬೇಕು ಎಂದು ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಚಾಮುಂಡಿ ಬೆಟ್ಟದಲ್ಲಿ ಇಂದು ನಡೆದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಜನರಲ್ಲಿ ರಾಕ್ಷಸ ಗುಣ ಹೆಚ್ಚಾಗುತ್ತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಕ್ಷಸ ಗುಣ ತೊರೆದು, ದೈವ ಗುಣವನ್ನು ನಿತ್ಯವೂ ಅನುಸರಿಸಬೇಕು. ದ್ವೇಷ, ಅಸೂಯೆಗಳನ್ನು ಬಿಟ್ಟು ಶಾಂತಿಯಿಂದ ಅಭಿವೃದ್ಧಿಯತ್ತ ಸಾಗಬೇಕು ಎಂದರು.

ಮನುಷ್ಯ ಸತ್ತ ನಂತರ ಏನನ್ನೂ ತೆಗೆದುಕೊಂಡು ಹೋಗಲ್ಲ, ಹಾಗಾಗಿ ಎಲ್ಲರ ಪ್ರೀತಿ ವಿಶ್ವಾಸ ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ತಲೆದೋರಿರುವ ಬರಗಾಲ ಹೋಗಬೇಕು, ನಾಡಿಗೆ ಸಮೃದ್ಧಿಯನ್ನು ಚಾಮುಂಡೇಶ್ವರಿ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!