ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗುತ್ತದೆ, ಇದು ನನ್ನ ಗ್ಯಾರೆಂಟಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಯಾಕೆ ಗೊತ್ತಾ? ಕಾಂಗ್ರೆಸ್ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲ, ಸತ್ತ ಸರ್ಕಾರದಂತಿದೆ. ಫ್ರೀ ಕರೆಂಟ್, ಮಹಿಳೆಯರಿಗೆ ದುಡ್ಡು ಎಂದು ಹೇಳಿದ್ದಾರೆ. ಆದರೆ ಪ್ರತೀ ಮಹಿಳೆಗೆ ಈ ಲಾಭ ಇದೆಯಾ? ಎಲ್ಲರಿಗೂ ಸಿಕ್ಕಿದೆಯಾ? ಒಂದು ತಿಂಗಳು ಹಣ ಬಂದರೆ ಇನ್ನೊಂದು ತಿಂಗಳು ಇಲ್ಲ. ಅಪ್ಲೇ ಮಾಡಿದ್ದರೂ ಒಂದು ರೂಪಾಯಿ ಹಣ ಬಾರದವರೂ ಇದ್ದಾರೆ ಎಂದಿದ್ದಾರೆ.