ಕುಟುಂಬ ರಾಜಕಾರಣ ಈಗೆಲ್ಲಾ ಅಪ್ರಸ್ತುತ: ಡಾ. ಮಂಜುನಾಥ್‌ ಕೌಂಟರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್‌ ಮಂಜುನಾಥ ಕುಟುಂಬ ರಾಜಕಾರಣದ ಬಗ್ಗೆ ಕೌಂಟರ್‌ ನೀಡಿದ್ದಾರೆ.

ಕುಟುಂಬ ರಾಜಕಾರಣ ಅನ್ನೋದು ಈ ರಾಜ್ಯ, ದೇಶದಲ್ಲಿ ಅಪ್ರಸ್ತುತ. ಕುಟುಂಬ ರಾಜಕಾರಣದ ಇನ್ನೊಂದು ಭಾಗವಾಗಿ ಈಗೆಲ್ಲರೂ ತಮ್ಮ ಅಳಿಯಂದಿರನ್ನು ಕಣಕ್ಕೆ ಇಳಿಸುತ್ತಾರೆ ಎಂದು ಡಿಕೆ ಸುರೇಶ್‌ ನೀಡಿರುವ ಹೇಳಿಕೆಗೆ ಕೌಂಟರ್‌ ನೀಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಲಿಸ್ಟ್‌ ನೋಡಿ, ಇರೋರೆಲ್ಲಾ ಅಣ್ಣ, ಅಕ್ಕ, ತಮ್ಮ, ಹೆಂಡತಿ, ಮಗಳು, ಸೊಸೆ. ಈ ರೀತಿ ಮಾಡೋದು ಎಷ್ಟು ಸರಿ? ಹೊಸಬರಿಗೆ ಚಾನ್ಸ್‌ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಎಂಟು ದಿನಗಳಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ, ಅತ್ಯುತ್ತಮ ರೆಸ್ಪಾನ್ಸ್‌ ಸಿಕ್ಕಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!