ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ ಕುಟುಂಬ ರಾಜಕಾರಣದ ಬಗ್ಗೆ ಕೌಂಟರ್ ನೀಡಿದ್ದಾರೆ.
ಕುಟುಂಬ ರಾಜಕಾರಣ ಅನ್ನೋದು ಈ ರಾಜ್ಯ, ದೇಶದಲ್ಲಿ ಅಪ್ರಸ್ತುತ. ಕುಟುಂಬ ರಾಜಕಾರಣದ ಇನ್ನೊಂದು ಭಾಗವಾಗಿ ಈಗೆಲ್ಲರೂ ತಮ್ಮ ಅಳಿಯಂದಿರನ್ನು ಕಣಕ್ಕೆ ಇಳಿಸುತ್ತಾರೆ ಎಂದು ಡಿಕೆ ಸುರೇಶ್ ನೀಡಿರುವ ಹೇಳಿಕೆಗೆ ಕೌಂಟರ್ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಲಿಸ್ಟ್ ನೋಡಿ, ಇರೋರೆಲ್ಲಾ ಅಣ್ಣ, ಅಕ್ಕ, ತಮ್ಮ, ಹೆಂಡತಿ, ಮಗಳು, ಸೊಸೆ. ಈ ರೀತಿ ಮಾಡೋದು ಎಷ್ಟು ಸರಿ? ಹೊಸಬರಿಗೆ ಚಾನ್ಸ್ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಎಂಟು ದಿನಗಳಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ, ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದೆ ಎಂದು ಹೇಳಿದ್ದಾರೆ.