ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ ವ್ಯಕ್ತಿಯನ್ನು ಅಭಿಮಾನಿಗಳು ಹಿಡಿದು ಥಳಿಸಿರುವ ಘಟನೆ ಬೆಂಗಳೂರು ನಗರದ ಕೆ. ಪಿ. ಅಗ್ರಹಾರದಲ್ಲಿ ನಡೆದಿದೆ.
ಒದೆ ತಿಂದ ವ್ಯಕ್ತಿಯು ಸಿದ್ದರಾಮಯ್ಯ ಅವರ ಫೋಸ್ಟರ್ ನೋಡಿ ಬೈಯ್ಯುತ್ತಿದ್ದನು. ಈ ವೇಳೆ ಆತನ ದುರ್ವರ್ತನೆ ಕಂಡ ಸಿದ್ದು ಅಭಿಮಾನಿಗಳು, ಆತನನ್ನು ಸೆರೆಹಿಡಿದು ಕಪಾಳಕ್ಕೆ ಬಾರಿಸಿದ್ದಾರೆ. ಬಳಿಕ ಪೋಸ್ಟರ್ ಬಳಿ ಕರೆದೊಯ್ದು ಕ್ಷಮೆ ಕೇಳುವಂತೆ ಒತ್ತಾಯಿಸಿರುತ್ತಾರೆ. ಈ ವೇಳೆಯೂ ಆ ವ್ಯಕ್ತಿ ನಾಲಿಗೆ ಹರಿಬಿಟ್ಟ ಕಾರಣ ಅಭಿಮಾನಿಗಳು ಥಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಲ್ಲದೇ, ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆಯೂ ಅವಾಚ್ಯ ಶಬ್ದಗಳಿಂದ ಆತ ನಿಂದಿಸುತ್ತಿದ್ದ. ಕ್ಷಮೆ ಕೇಳಿದ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.