ಹೊಸದಿಗಂತ ಡಿಜಿಟಲ್ ಡೆಸ್ಕ್
ದಿನಗೂಲಿ ಹೆಚ್ಚಳ ಸಹಿತ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಕೃಷಿ ಕಾರ್ಮಿಕರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಂಗ್ರೂರ್ ನಗರದ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.
ಮನ್ರೇಗಾ ಯೋಜನೆಯಡಿ ದಿನಗೂಲಿಯನ್ನು 700 ರೂ.ಗೆ ಹೆಚ್ಚಿಸಬೇಕು. ದಲಿತರಿಗೆ ಐದು ಮರ್ಲಾ ಪ್ಲಾಟ್ ಸ್ಕೀಮ್ ಜಾರಿ ಮಾಡಬೇಕು, ಕಾಮನ್ ಪಂಚಾಯತ್ನ ಮೂರನೇ ಭಾಗವನ್ನು ಸಮುದಾಯಕ್ಕೆ ಭೋಗ್ಯಕ್ಕೆ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕೃಷಿ ಕಾರ್ಮಿಕರು ಭಾರೀ ಪ್ರತಿಭಟನೆಯನ್ನು ಕೈಗೊಂಡಿದ್ದರು.
ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿ, ಪ್ರತಿಭಟನಾಕಾರರನ್ನು ಚದುರಿಸಿದರು.
8 ಕಾರ್ಮಿಕ ಸಂಘಟನೆಗಳ ಒಕ್ಕೂಟ ಸಂಝಾ ಮಜ್ದೂರ್ ಮೋರ್ಚಾ ವೇದಿಕೆಯಡಿ ಕೃಷಿ ಕಾರ್ಮಿಕರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.