ಹೊಸದಿಗಂತ ವರದಿ ಕಲಬುರಗಿ:
ಸಾಲದ ಬಾಧೆ ತಾಳದೇ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ರೈತನೋವ೯ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಕಲಬುರಗಿ ತಾಲೂಕಿನ ಬೋಳೆವಾಡ ಗ್ರಾಮದಲ್ಲಿ ನಡೆದಿದೆ. ಕಲಬುರಗಿ ತಾಲೂಕಿನ ಬೋಳೆವಾಡ ಗ್ರಾಮದ ರವೀಂದ್ರ ಭೋಗಶೆಟ್ಟಿ (38) ಆತ್ಮಹತ್ಯೆಗೆ ಶರಣಾದ ರೈತ.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ನಲ್ಲಿ 10 ಲಕ್ಷಕ್ಕಿಂತ ಹೆಚ್ಚು ಸಾಲ ಮಾಡಿದ್ದರು. ಈ ಬಾರಿ ತೊಗರಿಗೆ ನೆಟೆ ರೋಗ ಬಂದು ಸಂಪೂರ್ಣ ಹಾಳಾಗಿದ್ದು, ಹಾನಿಗೊಳಗಾದ ಬೆಳೆಯನ್ನು ಕಂಡ ನಂತರ ಕಂಗಾಲಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಲಬುರಗಿ ವಿಶ್ವವಿದ್ಯಾಲಯದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.