ಸಖತ್ ಐಡಿಯಾ: ಬೆಳೆ ರಕ್ಷಿಸಲು ಶ್ವಾನಕ್ಕೆ ಹುಲಿ ವೇಷ ಹಾಕಿದ ರೈತ!

ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಅನೇಕ ರೀತಿಯಲ್ಲಿ ತಂತ್ರಗಳನ್ನು ಬಳಸುವುದನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ರೈತ ಶ್ವಾನಕ್ಕೆ ಹುಲಿಯ ರೂಪ ಕೊಟ್ಟು ತನ್ನ ಜಮೀನಿನಲ್ಲಿ ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳುವ ಸಖತ್‌ ಐಡಿಯಾ ಮಾಡಿದ್ದಾನೆ.

ಚಾಮರಾಜನಗರದ ಬುದ್ದಿವಂತ ರೈತನೋರ್ವ ಶ್ವಾನವೊಂದಕ್ಕೆ ಹುಲಿಯ ಬಣ್ಣವನ್ನು ಬಳಿದಿದ್ದು, ಬೆಳೆಗಳನ್ನು ವನ್ಯಜೀವಿಗಳಿಂದ ರಕ್ಷಣೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ರೈತನ ಈ ಒಂದು ವಿಲಕ್ಷಣ ಉಪಾಯದಿಂದ ಸಾರ್ವಜನಿಕರು ಭಯಭೀತರಾಗುವುದರ ಜೊತೆಗೆ ನಗೆಗಡಲಿನಲ್ಲಿ ತೇಲುವಂತ ಘಟನೆ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ನಡೆದಿದೆ.

ಹುಲಿಯ ಬಣ್ಣ ಹೊತ್ತಿರುವ ಶ್ವಾನದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!