ಕಬ್ಬು ದರ ನಿಗದಿಗೆ ರೈತರ ಪಟ್ಟು: ಪ್ರತಿಭಟನೆ ಕಾವಿಗೆ ಗದ್ದನಕೇರಿ ಕ್ರಾಸ್ ನಲ್ಲಿ ಹೈವೇ ಬಂದ್

ಹೊಸದಿಗಂತ ವರದಿ ಬಾಗಲಕೋಟ:

ಕಬ್ಬಿಗೆ ದರ ನಿಗದಿಪಡಿಸುವಂತೆ ಒತ್ತಾಯಿಸಿ ರೈತರು ಗದ್ದನಕೇರಿ ಕ್ರಾಸ್ ನ ಹುಬ್ಬಳ್ಳಿ – ಸೊಲ್ಲಾಪುರ ಹೆದ್ದಾರಿ ಬಂದ್ ಬೃಹತ್ ಪ್ರತಿಭಟನೆ ಮಾಡಿದರು.
ಹುಬ್ಬಳ್ಳಿ,ಬೆಳಗಾವಿ, ಸೋಲಾಪುರ, ಇಲಕಲ್ ,ಬಾಗಲಕೋಟೆ ಕಡೆ ಹೋಗುವ ಎಲ್ಲ ಮಾರ್ಗ ರೈತರು ಬಂದ್ ಮಾಡಿ ರೈತರು ಹೋರಾಟ ನಡೆಸುತ್ತಿದ್ದಾರೆ.‌ಕಬ್ಬಿಗೆ ಪ್ರತಿಟನ್ ಗೆ 2900 ನೀಡಬೇಕು ಎಂದು ರೈತರು ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ.

ಈಗಾಗಲೇ ಸುಮಾರು ದಿನಗಳಿಂದ ರೈತರು ಕಬ್ಬಿಗೆ ದರ ನಿಗದಿಮಾಡಬೇಕು ಎಂದು ಹೋರಾಟ ಮಾಡುತ್ತಿದ್ದರು. ಇಂದು ಬಾಗಲಕೋಟ ಜಿಲ್ಲೆಯ ಗದ್ದಿ ಕ್ರಾಸ್ ನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಸರಕಾರ ವಿರುದ್ಧವ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬಂದ್ ಆದ್ದರಿಂದ ರಸ್ತೆ ವಾಹನ ಸಂಚಾರ ಅಡೆತಡೆ ಉಂಟಾಗಿದೆ. ಈ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!