ಹೊಸದಿಗಂತ ವರದಿ,ವಿಜಯಪುರ:
ಗುಮ್ಮಟನಗರಿಯಲ್ಲಿ ನಗರ ವಾರ್ಷಿಕೋತ್ಸವ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕರಿಂದ ಭಾನುವಾರ ಆಕರ್ಷಕ ಪಥಸಂಚಲನ ಹಮ್ಮಿಕೊಳ್ಳಲಾಯಿತು.
ನಗರದ ಗೋದಾವರಿ ಹೋಟೆಲ್ ಬಳಿಯಿಂದ ಆರಂಭಗೊಂಡ ಗಣವೇಷಧಾರಿಗಳ ಪಥಸಂಚಲನ, ಶಿವಾಜಿ ವೃತ್ತ, ಡೊಬಳೆ ಗಲ್ಲಿ, ಉಪ್ಪಲಿ ಬುರಜ್, ಸರಾಫ್ ಬಜಾರ್, ಗಾಂಧಿ ವೃತ್ತ, ಸಿದ್ಧೇಶ್ವರ ದೇವಸ್ಥಾನ, ಕೋರಳ್ಳಿ ಚೌಕ್, ರಜಪೂತ ಗಲ್ಲಿ ಮಾರ್ಗದಿಂದ ಸಾಗಿ ನಾಗೂರ ಕಾಲೇಜ್ ಬಳಿ ಮುಕ್ತಾಯವಾಯಿತು.
ಪಥಸಂಚಲನ ಮಾರ್ಗದುದ್ದಕ್ಕೂ ಗಣವೇಷಾಧಾರಿಗಳಿಂದ, ವಂದೇ ಮಾತರಂ ಘೋಷಣೆ ಮೊಳಗುತ್ತಿತ್ತು.
ಪಥಸಂಚಲನ ಮಾರ್ಗದುದ್ದಕ್ಕೂ ಹಲವೆಡೆ ಸಾರ್ವಜನಿಕರು ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿ ಮಾಡಿ, ಸ್ವಯಂ ಸೇವಕರನ್ನು ಗೌರವಿಸಿದರು.
ಈ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.