July 27, 2026
Monday, July 27, 2026
spot_img

ಬನವಾಸಿಯಲ್ಲಿ ಭೀಕರ ಅಪಘಾತ: ಗೂಡ್ಸ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸಾ*ವು

ಹೊಸದಿಗಂತ ವರದಿ, ಬನವಾಸಿ:

ಗೂಡ್ಸ್ ವಾಹನ-ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಬನವಾಸಿ-ಸಿದ್ದಾಪುರ ಮುಖ್ಯ ರಸ್ತೆಯ ಸಮೀಪದ ಭಾಶಿ ಗ್ರಾಮದ ಭದ್ರಪುರ ಕ್ರಾಸ್ ಬಳಿ ನಡೆದಿದೆ.

ಸಾಗರ ತಾಲ್ಲೂಕಿನ ಕಾನ್ಲೆ,ಮಂದಗಳಲೆ ಗ್ರಾಮದ ಗುರುಮೂರ್ತಿ ಆನಂದಪ್ಪ ಛಲವಾದಿ (24)ಮೃತ ವ್ಯಕ್ತಿ.

ಬನವಾಸಿ ಕಡೆಯಿಂದ ಚಂದ್ರಗುತ್ತಿ ಕಡೆಗೆ ಸಾಗುತ್ತಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದ ನಿಯಾಜ್ ಮುನಿರ ಕಿತ್ತೂರು ಎಂಬ ಚಾಲಕನ ನಿರ್ಲಕ್ಷ್ಯತನದಿಂದ ಗೂಡ್ಸ್ ವಾಹ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಘಟನಾ ಸ್ಥಳಕ್ಕೆ ಸಿಪಿಐ ಶಶಿಕಾಂತ್ ವರ್ಮ, ಪಿಎಸ್ಐಗಳಾದ ಮಾಂತೇಶ ಕುಂಬಾರ, ರವೀಂದ್ರ ಬಿರಾದಾರ ಭೇಟಿ ನೀಡಿದ್ದಾರೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !