ಹೊಸದಿಗಂತ ವರದಿ ಮಂಡ್ಯ :
ಮಹಿಷಾಸುರನ ಉತ್ಸವವನ್ನು ತಾಲೂಕಿನ ಮಂಗಲ ಗ್ರಾಮದಲ್ಲಿ ವೈಭವದಿಂದ ಆಚರಿಸಲಾಯಿತು.
ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿರುವ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿ ಮಹಿಷ ಉತ್ಸವವನ್ನು ಆಚರಿಸಿದರು.
ಸಮಾನ ಮನಸ್ಕರ ವೇದಿಕೆ ಜೊತೆಗೂಡಿದ ಗ್ರಾಮದ ಜನತೆ ಮಹಿಷಾಸುರನ ಜನಪರ ಪ್ರೀತಿ ಬಗ್ಗೆ ಘೋಷಣೆಗಳನ್ನು ಕೂಗಿ ನಾಡಿನ ರಕ್ಷಣೆಗೆ ಮಹಿಷಾಸುರನ ಕೊಡುಗೆಯನ್ನು ಸ್ಮರಿಸಿದರು.
ಇದೇ ವೇಳೆ ದೇವಾಲಯದಲ್ಲಿ ಪೂಜೆ ನಡೆಯಿತು ನೆರದಿದ್ದ ಮಹಿಷಾ ಪಡೆಗೆ ಸಿಹಿ ವಿತರಿಸಿ ಮಹಿಷ ಉತ್ಸವದ ಸಂಭ್ರಮವನ್ನ ಮೆರೆದರು.
ಸಮಾನ ಮನಸ್ಕರ ವೇದಿಕೆ ಮುಖಂಡರಾದ ಮಂಗಲ ಲಂಕೇಶ್, ಡಿಎಸ್ಎಸ್ ಮುಖಂಡ ಪ್ರಸನ್ನ ತೂಬಿನಕೆರೆ . ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವು, ಕುಮಾರ್ಗೌಡ, ಸಂತೋಷ್ ಮಂಡ್ಯಉಮಾಪತಿ, ಕೊತ್ತತ್ತಿ ಸೋಮಶೇಖರ್, ಮತಿತರಿದ್ದರು.