ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಪದಲ್ಲಿ ತೆಗೆದುಕೊಳ್ಳುವ ಸಣ್ಣ ನಿರ್ಧಾರ ಮನೆಯನ್ನೇ ಮುರಿದು, ಜೀವವೇ ಹೋಗುವಂತೆ ಮಾಡುತ್ತದೆ.
ರಾಮನಗರದಲ್ಲಿ ತಾಯಿ, ಮಗ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದು, ಆತ್ಮಹತ್ಯೆಯಲ್ಲಿ ಪ್ರಕರಣ ಕೊನೆಯಾಗಿದೆ. ರಾತ್ರಿ ಊಟದ ವಿಷಯವಾಗಿ ಮಗ ಹರ್ಷ ಜಗಳವಾಡಿದ್ದು, ಮಗನ ಜೊತೆ ಜಗಳದಿಂದ ಮನನೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾಯಿ ಸಾವಿಗೆ ಕಾರಣನಾದ ದುಃಖಕ್ಕೆ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಐಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.