ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ಗುಂಪುಗಳ ನಡುವೆ ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡುವ ಭಾಷಣ ಮಾಡಿದ ಆರೋಪದ ಮೇಲೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜ.8ರಂದು ಪಾಪ್ಪಿರೆಡ್ಡಿಪಟ್ಟಿ ಬಳಿಯ ಬೊಮ್ಮಿಡಿಯಂ ಸೇಂಟ್ ಲೂಡ್ಸ್ ಚರ್ಚ್ ಹೊರಭಾಗದಲ್ಲಿ ನಡೆದ ರ್ಯಾಲಿಯಲ್ಲಿದ್ದ ಅಣ್ಣಾಮಲೈ ಅವರನ್ನು ಚರ್ಚ್ ಒಳಕ್ಕೆ ಬಾರದಂತೆ ಕ್ರಿಶ್ಚಿಯನ್ ಯುವಕರ ಗುಂಪು ವಿರೋಧಿಸಿದೆ.
ಈ ವಿಷಯವಾಗಿ ಗುಂಪು ಹಾಗೂ ಅಣ್ಣಾಮಲೈ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಸಂದರ್ಭದಲ್ಲಿದ್ದ ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಲ್ಲಿ ಅಣ್ಣಾಮಲೈ ಯುವಕರ ಹೆಗಲ ಮೇಲೆ ಕೈ ಇಟ್ಟು ಸಮಾಧಾನಿಸಿದ್ದು ಕಾಣಿಸಿದೆ. ಆದರೆ ಶಾಂತಿಗೆ ಧಕ್ಕೆ ಹಾಗೂ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.