ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬೆಂಗಳೂರಿನದ ಐತಿಹಾಸಿಕ ಕರಗ ಮಹೋತ್ಸವದ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ವಾಹನಗಳು ಬೆಂಕಿಗಾಹುತಿಯಾಗಿವೆ.
ದೇವಸ್ಥಾನದ ಮುಂದೆ ಹಚ್ಚಿದ ಕರ್ಪೂರ ತಗುಲಿ ಸ್ಥಳದಲ್ಲಿದ್ದ ವಾಹನಗಳು ಸುಟ್ಟು ಭಸ್ಮವಾಗಿವೆ.
ಕರ್ಪೂರ ಹಚ್ಚುವ ವೇಳೆ ಮಾಲೀಕರಿಗೆ ತಮ್ಮ ಬೈಕ್ಗಳನ್ನು ತೆರವುಗೊಳಿಸುವಂತೆ ಮೈಕ್ನಲ್ಲಿ ಹೇಳಿದರೂ ಕೂಡ ಭಕ್ತರು ತೆರವು ಮಾಡಿರಲಿಲ್ಲ. ಇದರಿಂದಾಗಿ ಬೆಂಕಿ ಕೆನ್ನಾಲಿಗೆ ವಾಹನಗಳಿಗೆ ವ್ಯಾಪಿಸಿದೆ.
ಘಟನೆಯಲ್ಲಿ ದೇವಸ್ಥಾನದ ಆವರಣದಲ್ಲಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳು ಸುಟ್ಟು ಭಸ್ಮವಾಗಿವೆ.
ಮಾರ್ಚ್ 29 ರಿಂದ ಆರಂಭವಾದ ಕರಗ ಉತ್ಸವದಲ್ಲಿ ಇಂದು ದೌಪದಿಗ ಹೂವಿನ ಕರಗವನ್ನ ಕರಗ ಪೂಜಾರಿ ಜ್ಞಾನೇಂದ್ರ ಹೊತ್ತುಕೊಂಡು ಕರಗ ಬೀದಿಗಳಲ್ಲಿ ಮೆರವಣಿಗೆ ಮಾಡಲಿದ್ದಾರೆ.
ಇಂದು ರಾತ್ರಿ 12:30ಕ್ಕೆ ಕರಗ ಶಕ್ತೋತ್ಸವ ಆರಂಭವಾಗಲಿದ್ದು, ಕರಗ ಸಾಗುವ ಮಾರ್ಗದ್ದುದ್ದಕ್ಕೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿ ಕರಗದ ದರ್ಶನ ಪಡೆಯಲಿದ್ದಾರೆ.