ಬೆಂಕಿ ಅವಘಡ, 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮ

‌ಹೊಸದಿಗಂತ ವರದಿ ವಿಜಯಪುರ: 

ಆಕಸ್ಮಿಕ ಬೆಂಕಿ ಅವಘಡದಿಂದ ಅಂದಾಜು 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸಮೀಪದ ಆಂಧ್ರಪ್ರದೇಶ ರೈತರ ಲಕ್ಷ್ಮಿ ಕ್ಯಾಂಪ್‌ನಲ್ಲಿ ನಡೆದಿದೆ.

ಈ ಬೆಂಕಿ ಅವಘಡದಲ್ಲಿ ಮೂರು ಶೆಡ್‌ಗಳು ಭಸ್ಮವಾಗಿದ್ದು, ಒಂದು ಟ್ರ್ಯಾಕ್ಟರ್‌, ಮೂರು ಬೈಕ್, ಅಪಾರ ಪ್ರಮಾಣದ ಗೊಬ್ಬರ, ಅಕ್ಕಿ ಪಾಕೆಟ್‌ ಸೇರಿದಂತೆ ದೈನಂದಿನ ವಸ್ತುಗಳು ಬೆಂಕಿಗಾಹುತಿಯಾಗಿವೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!