ಹೊಸದಿಗಂತ ವರದಿ, ಕೊಪ್ಪಳ:
ನಗರದ ಗಡಿಯಾರ ಕಂಬದ ತೆಂಗಿನಕಾಯಿ ಮಳಿಗೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಬುಧವಾರ ಬೆಳಗ್ಗೆ ಧಗ ಧಗ ಹೊತ್ತಿ ಉರಿಯಿತು.
ಪ್ರಭು ನಿಡಶೇಷಿ ಎನ್ನುವವರ ಅಂಗಡಿ ಇದಾಗಿದ್ದು, ಅಂಗಡಿಯಲ್ಲಿದ್ದ ಸಿಲಿಂಡರ್ ಕೂಡ ಸ್ಫೋಟ ಗೊಂಡಿದೆ. ಬೆಂಕಿ ಕೆನ್ನೆಲಿಗೆಗೆ ಸಿಲುಕಿ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ