ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮತ್ತೆ ಕಾಣಿಸಿಕೊಂಡಿದೆ ಬೆಂಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಅರಣ್ಯ ವಿಭಾಗದಿಂದ ಆರಂಭವಾದ ಬೆಂಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡೆಗೂ ಹರಡತೊಡಗಿದೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ತಾಲೂಕಿನ ವನ್ಯಜೀವಿ ವಿಭಾಗದ ನಾವರ ಬಳಿಯ ಕಾಡಿನತ್ತ ಬೆಂಕಿ ಪಸರಿಸುತ್ತಿದ್ದು, ತಾಲೂಕಿನ ಕೆಲವು ಸ್ಥಳಗಳಿಗೆಗಳಿಗೆ ಬೆಂಕಿ ಪಸರಿಸಿರುವ ದೃಶ್ಯ ದೂರದ ಅರಣ್ಯದಿಂದ ಕಂಡು ಬರುತ್ತಿದೆ.

ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯ ಜೀವಿ ವಿಭಾಗದ ಸಿಬ್ಬಂದಿ ಬೆಂಕಿ ಹತೋಟಿಗೆ ಧಾವಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷವೂ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ ಕಡೆಯಿಂದ ಆರಂಭವಾದ ಬೆಂಕಿ ಬೆಳ್ತಂಗಡಿ ತಾಲೂಕಿನ ವನ್ಯ ಜೀವಿ ವಿಭಾಗದ ಹಲವು ಪರಿಸರಗಳಿಗೆ ಹಬ್ಬಿ ಭಾರೀ ಕಾಡ್ಗಿಚ್ಚು ಕಂಡು ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!