ಚಿಕ್ಕಮಗಳೂರಿನಲ್ಲಿ ಪಟಾಕಿ ಸಿಡಿದು ವ್ಯಕ್ತಿ ಸಾವು, ನಾಲ್ವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರಿನ ತರೀಕೆರೆಯ ಸುಣ್ಣದಹಳ್ಳಿಯಲ್ಲಿ ಪಟಾಕಿ ಸಿಡಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ.

30 ವರ್ಷದ ಪ್ರದೀಪ್ ಆಟಂಬಾಂಬ್‌ನ್ನು ತಾನು ಕುಳಿತ ಚೇರ್‌ನ ಅಡಿಯಲ್ಲಿ ಇಟ್ಟುಕೊಂಡು ಕುಳಿತಿದ್ದರು. ಈ ವೇಳೆ ಪಟಾಕಿ ಸಿಡಿದಿದ್ದು, ಪ್ರದೀಪ್ ಐದು ಅಡಿ ಮೇಲೆ ಹಾರಿ ಕೆಳಕ್ಕೆ ಬಿದ್ದಿದ್ದಾರೆ. ಸೂಕ್ಷ್ಮ ಅಂಗಗಳಿಗೆ ಹೊಡೆತ ಬಿದ್ದು ಪ್ರದೀಪ್ ಮೃತಪಟ್ಟಿದ್ದಾರೆ.

ಇವರ ಜೊತೆಯಲ್ಲಿದ್ದ ಯುವಕ ಹಾಗೂ ಮೂವರು ಮಕ್ಕಳಿಗೂ ಗಂಭೀರ ಗಾಯಗಳಾಗಿವೆ. ಪಟಾಕಿ ಸಿಡಿದ ರಭಸಕ್ಕೆ ಮನೆಯ ಗಾಜುಗಳು ಪುಡಿಪುಡಿಯಾಗಿವೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!